ಬೆಂಗಳೂರು : ನನಗೆ ಗಾಂಧಿನಗರದಲ್ಲಿ ಥಿಯೇಟರ್ ಎಲ್ಲಿದೆ ಅಂತ ಗೊತ್ತಿರಲಿಲ್ಲ ಎಂದು ಕಾಂತಾರ ಖ್ಯಾತಿಯ ಡಿವೈನ್ ಸ್ಟಾರ್ ನಟಿ ರಿಷಬ್ ಶೆಟ್ಟಿ ಹೇಳಿದರು.
ಬರ್ತ್ ಡೇ ಕಾರ್ಯಕ್ರಮಕ್ಕೆ ಮಾತನಾಡಿದ ಅವರು, ಇಡೀ ಭಾರತೀಯ ಪ್ರೇಕ್ಷಕರಿಗೆ ತಲೆ ಬಾಗುತ್ತೇನೆ. ಕನ್ನಡಿಗರಿಗೆ ಮೊದಲು ತಲೆ ಬಾಗಲೇಬೇಕು. ನಿಮ್ಮನ್ನು ರಂಜಿಸೋ ಮೂಲಕ ನಿಮ್ಮೆಲ್ಲರ ಋಣ ತೀರಿಸುತ್ತೇನೆ ಎಂದರು.
ಸಂಪಾದನೆ ಹೆಂಗಿರಬೇಕು ಅಂದ್ರೆ, ಎಷ್ಟೆ ಮಳೆ ಬಂದರೂ ನನಗಾಗಿ ಕಾದರಲ್ಲಾ ಅದೇ ನನ್ನ ಜೀವಮಾನದ ಸಂಪಾದನೆ. ಇದು ಖರ್ಚು ಮಾಡೋಕೆ ಸಂಪಾದಿಸಿರೋದು ಅಲ್ಲ. ಮಳೆಯಲ್ಲಿ ಇದು ಸಕ್ಸಸ್ ಆಗಲ್ಲ ಅಂದುಕೊಂಡಿದ್ದೆ. ಮಳೆ ಬಂದು ಭೂಮಿ ತಂಪೆರೆದಿದೆ. ನಿಮ್ಮ ಕಾಯುವಿಕೆ ನನಗೆ ದೊಡ್ಡ ಗಿಫ್ಟ್ ಎಂದು ಹೇಳಿದರು.
ಇದನ್ನೂ ಓದಿ : ಮತ್ತೊಂದು ಕರಾವಳಿಯ ನೈಜ ಕಥೆಗೆ ‘ಟೋಬಿ’ ಢಮರುಗ
ನಾನು ಡೈಲಾಗ್ ಹೇಳೋ ಹೀರೊ ಅಲ್ಲ
ಮಕ್ಕಳೊಂದಿಗೆ ಸ್ಟೇಜ್ ಹಂಚಿಕೊಂಡ ರಿಷಬ್ ಶೆಟ್ಟಿ, ಸ.ಹಿ.ಪ್ರಾ. ಶಾಲೆ ಕಾಸರಗೋಡು ಚಿತ್ರದ ಡೈಲಾಗ್ ಹೊಡೆದರು. ಕಾಂತಾರ ಚಿತ್ರದ ಎರಡು ಡೈಲಾಗ್ ಹೊಡೆದು ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡರು. ನಾನು ಜಾಸ್ತಿ ಡೈಲಾಗ್ ಹೇಳುವ ಹೀರೊ ಅಲ್ಲ. ಇಲ್ಲಿಗೆ ಬಂದಿರುವ ಎಲ್ಲಾ ಸ್ಟಾರ್ಸ್ ಅಭಿಮಾನಿಗಳಿಗೂ ನಾನು ಋಣಿ ಎಂದರು.
ಇದೇ ಯಜಮಾನ್ರು ಸಂಪಾದಿಸಿರೋ ಆಸ್ತಿ
ಪತ್ನಿ ಪ್ರಗತಿ ರಿಷಬ್ ಶೆಟ್ಟಿ ಮಾತನಾಡಿ, ಇವತ್ತು ನಿಜಕ್ಕೂ ಎಮೋಷನಲ್ ಆಗಿದ್ದೀನಿ. ಇಷ್ಟು ಜನರನ್ನು ಕಂಡು ಏನು ಹೇಳಬೇಕು ಅಂತ ಗೊತ್ತಾಗ್ತಿಲ್ಲ. ಇದೇ ನಮ್ಮ ಯಜಮಾನರು ಸಂಪಾದಿಸಿರೋ ಆಸ್ತಿ. ಹ್ಯಾಪಿ ಬರ್ತ್ ಡೇ ಶೆಟ್ರೆ ಎಂದು ರಿಷಬ್ ಶೆಟ್ಟಿಗೆ ಶುಭಾಶಯ ಕೋರಿದರು.