ಮಂಡ್ಯ : ಸಿಡಿ, ಪೆನ್ ಡ್ರೈವ್ ತೋರಿಸಲಿ.. ನಾವು ನೋಡ್ತೇವೆ, ಕೇಳ್ತೇವೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ವರ್ಗಾವಣೆ ದಂಧೆಯ ಪೆನ್ ಡ್ರೈವ್ ಆರೋಪದ ವಿಚಾರವಾಗಿ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಯಾರು ಯಾರು ಹತ್ತಿರ ಸಿಡಿ, ಪೆನ್ ಡ್ರೈವ್ ಇದ್ಯೋ ತೋರಿಸಲಿ. ನಿಜಾಂಶ ಗೊತ್ತಾಗುತ್ತೆ. ನಾವು ನೋಡ್ತೀವಿ, ಕೇಳ್ತೀವಿ. ಹೇಳ್ತಾ ಹೋದ್ರೆ ಎಲ್ಲರೂ ಹೇಳ್ತಾರೆ. ಕಾಂಗ್ರೆಸ್ ನವರು 40% ಅಂತ ಹೇಳಿದ್ರು, ಅದಕ್ಕೆ ಯಾವ ದಾಖಲೆ ಕೊಟ್ಟಿಲ್ಲ ಎಂದು ಕುಟುಕಿದರು.
ಇದನ್ನೂ ಓದಿ : ನಿನಗೇನು ಮಂಡ್ಯ ಬಗ್ಗೆ ಗೊತ್ತು ಕೂತ್ಕೊಳ್ಳಪ್ಪ : ರಾಜಣ್ಣಗೆ ಹೆಚ್ಡಿಕೆ ಕೌಂಟರ್
ಲೋಕಾಯುಕ್ತಕ್ಕೆ ದೂರು ಕೊಡಲಿ
ಇವಾಗ ಇವ್ರು ವರ್ಗಾವಣೆಗೆ 10 ಕೋಟಿ ಅಂತ ಹೇಳಿ ಪೆನ್ ಡ್ರೈವ್ ತೋರಿಸ್ತಿದ್ದಾರೆ. ಯಾವ ದಾಖಲೇನು ಇಲ್ಲ. ಅಪರಾಧ ಮಾಡಿದವರ ವಿರುದ್ದ ಪೊಲೀಸ್ ದೂರು ಅಥವಾ ಲೋಕಾಯುಕ್ತಕ್ಕೆ ದೂರು ಕೊಡಲಿ. ಜೊತೆಗೆ ದಾಖಲೆ ಕೊಟ್ಟು ಕ್ರಮಕ್ಕೆ ಒತ್ತಾಯಿಸಬೇಕು. ಅದನ್ನು ಬಿಟ್ಟು ನಾವು ಮಾತನಾಡಿದ್ರೆ ಏನು ಪ್ರಯೋಜನಾ? ಎಂದು ಪ್ರಶ್ನಿಸಿದರು.
ನಾನು ಇಂಡಿಪೆಂಡೆಂಟ್ ಎಂಪಿ
ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಚರ್ಚೆ ವಿಚಾರ ಕುರಿತು ಮಾತನಾಡಿ, ನಾನು ಪಾರ್ಟಿ ಸೇರಿಲ್ಲ. ಪಾರ್ಟಿ ಬಗ್ಗೆ ಮಾತನಾಡಲ್ಲ. ಬೆಂಬಲ ಕೊಟ್ಟಿದ್ದರು, ಪಾರ್ಟಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಭಾಗಿಯಗಲ್ಲ. ನಾನು ಇಂಡಿಪೆಂಡೆಂಟ್ ಎಂಪಿ. ಹಾಗಾಗಿ, ಪಾರ್ಟಿಯ ಒಳ ನಿರ್ಧಾರದ ಬಗ್ಗೆ ಗೊತ್ತಾಗಲ್ಲ ಎಂದು ಹೇಳಿದರು.