ಬೆಂಗಳೂರು: 2023-24 ನೇ ಸಾಲಿನ ಚೊಚ್ಚಲು ಬಜೆಟ್ನ್ನು ಸಿಎಂ ಸಿದ್ದರಾಮಯ್ಯಇಂದು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ.
ಹೌದು, ಬಜೆಟ್ ಮಂಡನೆಗೂ ಮುನ್ನ ಇಂದು ಬೆಳಗ್ಗೆ 9ಕ್ಕೆ ವಿಧಾನಸೌಧದಲ್ಲಿ ಸಿಎಲ್ಪಿ ಮೀಟಿಂಗ್ ನಡೆಯಲಿದ್ದು,ನಂತರ ಬೆಳಗ್ಗೆ 11.30ಕ್ಕೆ ಸಚಿವ ಸಂಪುಟ ಸಭೆಯನ್ನು ಸಿಎಂ ಸಿದ್ದರಾಮಯ್ಯ ನಡೆಸಲಿದ್ದಾರೆ.
ಇದನ್ನೂ ಓದಿ: ಇಂದು ರಾಜ್ಯ ಬಜೆಟ್: 14 ನೇ ಬಾರಿಗೆ ಸಿಎಂ ಸಿದ್ದು ಬಜೆಟ್ ಮಂಡನೆ
2023-24 ನೇ ಸಾಲಿನ ಬಜೆಟ್ ಮಂಡನೆ ಮಧ್ಯಾಹ್ನ 12 ಕ್ಕೆ ಮಂಡಿಸಲಿದ್ದು, ಸಂಜೆ ನಾಲ್ಕು ಗಂಟೆಗೆ ಬಜೆಟ್ ಸಂಬಂಧ ಸುದ್ದಿಗೋಷ್ಠಿ ಸಿಎಂ ಸಿದ್ದರಾಮಯ್ಯ ನಡೆಸಲಿದ್ದಾರೆ.
ಇಂದು ರಾಜ್ಯ ಬಜೆಟ್
ಕಾಂಗ್ರೆಸ್ ಸರ್ಕಾರದ ಬಜೆಟ್ ಮಂಡನೆಗೆ ಕೌಂಟ್ಡೌನ್ ಆರಂಭವಾಗಿದ್ದು ಇಂದು ಮಧ್ಯಾಹ್ನ 12 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 14ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ ರಾಜ್ಯದ ಜನತೆಯಲ್ಲಿ ಬಾರಿ ನೀರೀಕ್ಷೆ ಹುಟ್ಟಿಸಿದ್ದು ರಾಜ್ಯ ಸರ್ಕಾರದ ಗ್ಯಾರೆಂಟೆ ಯೋಜನೆಗಳಿಂದ ಬೇರೆ ಯೋಜನೆಗಳಿಗೆ ಅನುದಾನ ಕಡಿತವಾಗುವುದಾ ಮತ್ತು ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರಕ್ಕೆ ಸಿಗಲಿದ್ಯಾ ಬಂಪರ್ ಎಂಬುದು ಕುತೂಹಲ ಮೂಡಿಸಿದೆ.