ಬೆಂಗಳೂರು: ಹೊಯ್ಸಳ ಬೀಟ್ ಪೊಲೀಸರ ಕಣ್ಣಮುಂದೆಯೇ ಆಟೋ ಚಾಲಕ ನಿಯಂತ್ರಣ ತಪ್ಪಿ ಓಮ್ನಿ ಕಾರಿಗೆ ಗುದ್ದಿ ಗಂಭೀರ ಗಾಯಗಳಾಗಿ ನರಳಾಡುತ್ತಿದ್ದರು ಕಂಡು ಕಾಣದಂತೆ ಹೊರಟ ಪೊಲೀಸರ ನಡೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಬಜೆಟ್ ಮೇಲೆ ರಾಜ್ಯದ ಜನತೆಯ ನಿರೀಕ್ಷೆಗಳೇನು? ಹೀಗಿದೆ ಪ್ರಾಂತ್ಯವಾರು ಮಾಹಿತಿ
ರಂಗನಾಥ್. ಪೊಲೀಸರ ನಿರ್ಲಕ್ಷ್ಯದಿಂದ ಪ್ರಾಣಬಿಟ್ಟ ಚಾಲಕ, ಬೆಂಗಳೂರಿನ ಕುರುಬರಹಳ್ಳಿಯಲ್ಲಿ ಘಟನೆ ನಡೆದಿದ್ದು ಮಹಾಲಕ್ಷ್ಮಿ ಲೇಔಟ್ನ ಹೊಯ್ಸಳ ಬೀಟ್ ಪೊಲಿಸರ ನಿರ್ಲಕ್ಷ್ಯಕ್ಕೆ ಆಟೋ ಚಾಲಕ ಬಲಿಯಾಗಿದ್ದಾನೆ.
ಹೊಯ್ಸಳ ವಾಹನದ ಮುಂದೆಯೇ ಅಪಘಾತ ನಡೆದರು ವಾಹನ ನಿಲ್ಲಿಸದೆ ಹೊರಟ ಪೊಲೀಸ್ ಸಿಬ್ಬಂಧಿಗಳ ನಿರ್ಲಕ್ಷ್ಯದ ಸಿಸಿಟಿವಿ ದೃಶ್ಯಗಳು ಪವರ್ ಟಿವಿ ಗೆ ಲಭ್ಯವಾಗಿದೆ. ದೃಶ್ಯಗಳನ್ನು ಕಂಡ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.