Saturday, August 23, 2025
Google search engine
HomeUncategorizedನಮ್ಮ ಡಿಸಿಎಂ ಸಾರ್ವಕಾಲಿಕ ಸತ್ಯ ಹೇಳಿದ್ದಾರೆ : ಬೊಮ್ಮಾಯಿ ಕೌಂಟರ್

ನಮ್ಮ ಡಿಸಿಎಂ ಸಾರ್ವಕಾಲಿಕ ಸತ್ಯ ಹೇಳಿದ್ದಾರೆ : ಬೊಮ್ಮಾಯಿ ಕೌಂಟರ್

ಬೆಂಗಳೂರು : ನಮ್ಮ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಾರ್ವಕಾಲಿಕ ಸತ್ಯ ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿಕೆಶಿಗೆ ಕೌಂಟರ್ ಕೊಟ್ಟರು

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಯಾರೂ ಯಾರಿಗೂ ಅಧಿಕಾರ ಕೊಡಲ್ಲ ಎಂದು ಕುಟುಕಿದರು.

ರಾಜಕಾರಣದಲ್ಲಿ ಇಲ್ಲಿದ್ದೋರು ಅಲ್ಲಿಗೆ ಹೋಗ್ತಾರೆ, ಅಲ್ಲಿದ್ದವರು ಇಲ್ಲಿಗೆ ಬರ್ತಾರೆ ಅಂತ ಡಿಕೆಶಿ ಹೇಳಿದ್ದಾರೆ. ರಾಜಕಾರಣದಲ್ಲಿ ಯಾವತ್ತಿದ್ರೂ ಏನು ಬೇಕಾದರೂ ಆಗಬಹುದು ಅಂದಿದಾರೆ. ರಾಜಕಾರಣದಲ್ಲಿ ಇನ್ನೂ ಒಂದಿದೆ, ಒಂದು ಕಾಲದಲ್ಲಿ ಪವರ್ ಪಾಲಿಟಿಕ್ಸ್ ವೇಟಿಂಗ್ ಗೇಮ್ ಆಗಿತ್ತು. ಈಗ ಪಾಲಿಟಿಕ್ಸ್ ವೇಟಿಂಗ್ ಗೇಮ್ ಆಗಿ ಉಳಿದಿಲ್ಲ ಎಂದು ಹೇಳಿದರು.

ಶಕ್ತಿ ಇದ್ದವನು ಅಧಿಕಾರ ಪಡೆದುಕೊಳ್ತಾನೆ

ಅವಕಾಶ ಬಂದಾಗ ಅಧಿಕಾರ ಪಡೆದುಕೊಳ್ಳಬೇಕಾಗುತ್ತದೆ. ಸರಿಯಾದ ರೀತಿಯಲ್ಲಿ ಅಧಿಕಾರ ಪಡೆದುಕೊಳ್ಳೋದಕ್ಕೆ ಚುನಾವಣೆ ಅಂತಾರೆ. ಚುನಾವಣೆ ಇಲ್ಲದಿದ್ದಾಗ ಶಕ್ತಿ ಇದ್ದವನು ಅಧಿಕಾರ ಪಡೆದುಕೊಳ್ತಾನೆ. ಶಕ್ತಿ ಇಲ್ಲದವರು ಅಧಿಕಾರ ಪಡೆದುಕೊಳ್ಳಲ್ಲ. ಶಕ್ತಿ ಇದ್ದವರು ಅವಕಾಶ ಬಳಸಿಕೊಳ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

ಇದನ್ನೂ ಓದಿ : ವಿದೇಶದಲ್ಲಿ ಭಾಷಣ ಮಾಡಿದ್ರೆ ನಮ್ಮ ಹೊಟ್ಟೆ ತುಂಬುತ್ತಾ? : ಟಿ.ಬಿ ಜಯಚಂದ್ರ ಗುಡುಗು

ಡಿಕೆಶಿಗೆ ಯಾವ ಕುದುರೆ ಸಿಗುತ್ತೆ ನೋಡೋಣ

ಕೊಟ್ಟ ಕುದುರೆ ಏರದವನು ಶೂರ ಅಲ್ಲ ಎನ್ನುವ ಮಾತಿದೆ. ಆದ್ರೆ, ಡಿ.‌ಕೆ ಶಿವಕುಮಾರ್ ಅವರು ಕೊಟ್ಟ ಕುದುರೆಗಳನ್ನೆಲ್ಲ ಏರಿದ್ದಾರೆ, ಇದರಲ್ಲಿ ಏನೂ ಸಂಶಯ ಇಲ್ಲ. ಹಿಂದೆ ಅವರು ಪವರ್ ಖಾತೆ ತಗೊಂಡಿದ್ರು, ಪವರ್ ಖಾತೆ ಜೊತೆಗೆ ಪವರ್ ಪಾಲಿಟಿಕ್ಸ್ ಸಹ ಮಾಡಿದ್ರು. ಮುಂದೆ ಡಿಕೆಶಿಗೆ ಯಾವ ಕುದುರೆ ಸಿಗುತ್ತೆ ಅಂತ ನೋಡೋಣ ಎಂದು ಬೊಮ್ಮಾಯಿ ಕಾಲೆಳೆದರು.

ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ, ಬದಲಾವಣೆಯೇ ಶಾಶ್ವತ. ಮುಂದಿನ ದಿನಗಳಲ್ಲಿ ಇಂತಹ ಹಲವು ಬದಲಾವಣೆಗಳನ್ನು‌ ನೋಡಲು ಸಾಧ್ಯವಾಗುತ್ತದೆ ಎನ್ನುವ ಮೂಲಕ ಬಸವರಾಜ ಬೊಮ್ಮಾಯಿ ರಾಜಕೀಯ ಬದಲಾವಣೆಯ ಸುಳಿವು ಕೊಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments