Saturday, May 18, 2024

ಅಕ್ಕಿ ಬದಲು ಹಣ ನೀಡುವ ಪ್ರಕ್ರಿಯೆಗೆ ಇದೇ ತಿಂಗಳು ಚಾಲನೆ: ಸಚಿವ ಸತೀಶ್ ಜಾರಕಿಹೋಳಿ

ಚಿಕ್ಕೋಡಿ : ಅನ್ನಭಾಗ್ಯ ಯೋಜನೆಯಡಿ 5 ಕೆ‌ಜಿ ಅಕ್ಕಿ ಬದಲು ಹಣ ನೀಡುವ ಪ್ರಕ್ರಿಯೆಗೆ ಈ ತಿಂಗಳು ಚಾಲನೆ ನೀಡಲಾಗುವುದು ಆದರೇ ಹಣ ಮುಂದಿನ ತಿಂಗಳು ದೊರೆಯಲಿದೆ ಎಂದು ಸಚಿವ ಸತೀಶ್ ಜಾರಕಿಹೋಳಿ ತಿಳಿಸಿದರು.

ಇದನ್ನೂ ಓದಿ : ಚಲಿಸುತ್ತಿದ್ದ ರೈಲಿನಲ್ಲಿ ಕುಡಿದು ಕತ್ತಿಯಿಂದ ದಾಳಿ ; ಕತ್ತಿ ಝಳಪಿಸುತ್ತಿದ್ದ ಇಬ್ಬರ ಬಂಧನ

ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಗ್ಯಾರೆಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿಗೆ ಬದಲು ಹಣವನ್ನು ಈ ತಿಂಗಳಿನಿಂದ ನೀಡುವುದಾಗಿ ಸರ್ಕಾರ ಹೇಳಿದೆ, ಪ್ರತಿ ತಿಂಗಳ ಪಡಿತರದ ಲೆಕ್ಕ ಇರಲಿದ್ದು ಈ ತಿಂಗಳ ಹಣ ಮುಂದಿನ ತಿಂಗಳು ನೀಡಲಾಗುವುದು ಅಂದರೇ ಜುಲೈ ತಿಂಗಳ ಹಣ ಅಗಷ್ಟ್ ತಿಂಗಳಿನಲ್ಲಿ ಸಿಗಲಿದೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES