Friday, May 17, 2024

5 ಕೆಜಿ ಅಕ್ಕಿ ಈಗಾಗಲೇ ಇದ್ಯಲ್ಲ, ತೊಂದರೆ ಏನು ಇಲ್ವಲ್ಲ : ಸತೀಶ್ ಜಾರಕಿಹೊಳಿ

ತುಮಕೂರು : 5 ಕಿಲೋ ಅಕ್ಕಿ ಈಗಾಗಲೇ ಇದ್ಯಲ್ಲ, ತೊಂದರೆ ಏನು ಇಲ್ವಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ತುಮಕೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತಿಂಗಳು ಆಗಲಿಲ್ಲ‌ ಅಂದ್ರೆ ಮುಂದಿನ ತಿಂಗಳು ಅಕ್ಕಿ ಕೊಡುತ್ತೇವೆ ಎಂದು ತಿಳಿಸಿದರು.

ಮುಂದಿನ ತಿಂಗಳು ನೀಡುತ್ತೇವೆ. ತಡ ಆಗಬಹುದು, ಆಗಂತ ತೊಂದರೆ ಏನು ಇಲ್ವಲ್ಲ. 5 ಕಿಲೋ ಈಗಾಗಲೇ ಇದ್ಯಲ್ಲ. ಎಲ್ಲಾ ರಾಜ್ಯದಿಂದ ಹಾಗೂ ಕೇಂದ್ರ ಸ್ವಾಮ್ಯಗಳಿಂದ ಅಕ್ಕಿ ತರಲು ಪ್ರಯತ್ನ ನಡೆಯುತ್ತಿದೆ. ತಡ ಆಗಬಹುದು ಬರುತ್ತೆ ಎಂದು ಹೇಳಿದರು.

ಇದನ್ನೂ ಓದಿ : ‘ಹ್ಯಾಕ್ ಸಚಿವ’ರೇ, 10+5 = 15 ಕೆಜಿ ಅಕ್ಕಿ ಕೊಡಿ : ಶಾಸಕ ಯತ್ನಾಳ್

5+5 = 10 ಕಿಲೋ ಅಕ್ಕಿ ಕೊಡ್ತೀವಿ

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತಿಭಟನೆ ವಿಚಾರ ಕುರಿತು ಮಾತನಾಡಿ, ಹೊರಗಡೆ ಹೋರಾಟ ಮಾಡಲು ಎಲ್ಲಾರಿಗೂ ಅವಕಾಶ ಇದೆ ಮಾಡಲಿ. ನಮಗೂ ಜವಾಬ್ದಾರಿ ಇದೆ. 10 ಪ್ಲಸ್ 5 ಸೇರಿ 15 ಕಿಲೋ ಅಕ್ಕಿ ಕೊಡಬೇಕು ಎಂಬ ಬಿಜೆಪಿ ಹೇಳಿಕೆಗೆ, ಪ್ರಣಾಳಿಕೆಯಲ್ಲಿ ತೆಗೆದು ನೋಡಲಿ ನಾವು ಚುನಾವಣೆಯಲ್ಲಿ ಹೇಳಿದ್ವಿ. ಕೇಂದ್ರದ 5 ಕಿಲೋ ಸೇರಿಸಿ10 ಕಿಲೋ ಅಕ್ಕಿ ಕೊಡ್ತಿವಿ ಅಂತ. ಅದನ್ನು ಕೊಡ್ತಿವಿ. 5 ಪ್ಲಸ್ 5 ಕೊಡ್ತೀವಿ ಎಂದು ತಿಳಿಸಿದರು.

ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಈಗ ಅಲ್ಲ ಮುಂದಿನ ಅವಧಿಯಲ್ಲಿ. ಸಿದ್ದರಾಮಯ್ಯ ಅವರ ನಂತರ ಎನ್ನುವ ಮೂಲಕ ಸಿಎಂ ಆಸೆಯ ಇಂಗಿತ ಪಡಿಸಿದರು.

RELATED ARTICLES

Related Articles

TRENDING ARTICLES