Monday, May 13, 2024

ವಿಪಕ್ಷಗಳ ಸಭೆಯಿಂದ ಜೆಡಿಎಸ್ ಔಟ್ : ದಳಪತಿಗಳು ಹೊರಗುಳಿಯಲು ಕಾರಣ ಏನು ?

ಬೆಂಗಳೂರು: ಮುಂದಿನ ಲೋಕಸಭೆಯಲ್ಲಿ ‌ಬಿಜೆಪಿ‌ಯನ್ನ ಸಂಘಟಿತವಾಗಿ ಎದುರಿಸುವ ಸಲುವಾಗಿ ಕೇಂದ್ರ ಸರ್ಕಾರವನ್ನು ಮಣಿಸಲು ವಿಪಕ್ಷಗಳು ಒಗ್ಗೂಡಿ ನಾಳೆ ಪಾಟ್ನಾದಲ್ಲಿ ಸಭೆಯನ್ನು ಕರೆದಿದೆ. ಈ ಸಭೆಯಲ್ಲಿ ಜೆಡಿಯು, ಟಿಎಂಸಿ, ಕಾಂಗ್ರೆಸ್ ‌ಸೇರಿ ಹಲವು ಪಕ್ಷಗಳು ಭಾಗಿಯಾಗುತ್ತಿವೆ. ಆದರೆ, ಈ ಸಭೆಯಲ್ಲಿ ಜೆಡಿಎಸ್​ ಭಾಗಿಯಾಗದಿರಲು ನಿರ್ಧರಿಸಿದೆ.

ಜೆಡಿಎಸ್​ನ ಈ ನಿರ್ಧಾರಕ್ಕೆ ಕಾರಣಗಳೇನು..?   

  1. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ‌ಪ್ರಮುಖ ರಾಜಕೀಯ ಶತ್ರು. ಹೀಗಾಗಿ ಪ್ರತಿಪಕ್ಷಗಳ‌ ಮೈತ್ರಿಯಲ್ಲಿ ಕಾಂಗ್ರೆಸ್ ಇರೋದರಿಂದ ಜೆಡಿಎಸ್​ಗೆ ಲಾಭವಿಲ್ಲ.
  2. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಜೆಡಿಎಸ್ ದೊಡ್ಡ ಹೊಡೆತ ನೀಡುತ್ತಿದೆ. ಕಳೆದ ಬಾರಿಯ ಲೋಕಸಭಾ ಮೈತ್ರಿ ಪ್ರಯೋಜನಕ್ಕೆ ಬಂದಿಲ್ಲ.
  3. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಮೈತ್ರಿ ಇಲ್ಲದೇ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದೆ.
  4. ಜೆಡಿಎಸ್ ಜೊತೆ ಮೈತ್ರಿಗೆ ಕಾಂಗ್ರೆಸ್ ಗೆ ಮನಸ್ಸಿಲ್ಲ.ಮೈತ್ರಿ ಮಾತು ಕೂಡ ಎತ್ತುತ್ತಿಲ್ಲ.
  5. ಮೈತ್ರಿ ಆದ್ರೂ ಸ್ಥಾನ ಹಂಚಿಕೆಯಲ್ಲಿ ಅಧಿಕಾರದಲ್ಲಿರೋ ಕಾಂಗ್ರೆಸ್ ಸಿಂಹಪಾಲು ಕೇಳಲಿದ್ದು, ಜೆಡಿಎಸ್ ಗೆ ಇದರಿಂದ ಲಾಭ ಕಡಿಮೆ.
  6. 5.ಗೆಲುವಿನ ಖುಷಿಯಲ್ಲಿರೋ ಕಾಂಗ್ರೆಸ್ ‌ಗಿಂತ ಬಿಜೆಪಿಗೆ ಜೆಡಿಎಸ್‌ ಮೇಲೆ  ಹೆಚ್ಚು ಒಲವಿದೆ.
  7. ಪ್ರತಿಪಕ್ಷಗಳ ಒಕ್ಕೂಟ ಸೇರಿದ್ರೆ ಜೆಡಿಎಸ್ ಗೆ ನಷ್ಟವೇ ಹೊರತು‌ ಲಾಭವಿಲ್ಲ.ಕಾಂಗ್ರೆಸ್ ಹೊರತುಪಡಿಸಿ ಪ್ರತಿಪಕ್ಷ ಒಕ್ಕೂಟದ ಬೇರೆ ಯಾವ ಪಕ್ಷವೂ ಜೆಡಿಎಸ್ ಗೆ ರಾಜ್ಯದಲ್ಲಿ ಕೈ ಬಲಪಡಿಸೋದು ಕಷ್ಟ ಅನ್ನೋ ತೀರ್ಮಾನಕ್ಕೆ ಜೆಡಿಎಸ್​ ಬಂದಿದೆ.

 

RELATED ARTICLES

Related Articles

TRENDING ARTICLES