Thursday, April 25, 2024

ಸಿದ್ಧಗಂಗಾ ಮಠದ ಅನುದಾನಕ್ಕೆ ತಡೆ : ಸ್ವಾಮೀಜಿಗಳ ಬಳಿ ಚರ್ಚೆ ಮಾಡಿಲ್ಲ ಎಂದ ಸಚಿವ ಜಮೀರ್

ತುಮಕೂರು : ಸಿದ್ದಗಂಗಾ ಮಠಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನ ರಾಜ್ಯ ಸರ್ಕಾರ ತಡೆಹಿಡಿದ ವಿಚಾರದ ಬಗ್ಗೆ ಸಚಿವ ಬಿ.ಝಡ್ ಜಮೀರ್ ಅಹಮ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶ್ರೀಗಳ ಗದ್ದುಗೆ ದರ್ಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಮುಖ್ಯಮಂತ್ರಿಗಳಿಗೆ ಈ ವಿಚಾರ ತಿಳಿಸುತ್ತೇನೆ. ನಾವು ಫಸ್ಟ್ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ಅನುದಾನ ತಡೆಹಿಡಿದ ಬಗ್ಗೆ ಸ್ವಾಮೀಜಿಗಳ ಬಳಿ ಚರ್ಚೆ ಮಾಡಿಲ್ಲ ಎಂದು ಹೇಳಿದ್ದಾರೆ.

ಸಿದ್ದಗಂಗಾ ಮಠಕ್ಕೆ ನಾನು ಹೊಸದಾಗಿ ಬರ್ತಿಲ್ಲ. ನಾನು 2006ರಲ್ಲಿ ಮಂತ್ರಿಯಾಗಿದ್ದೆ. ಆಗ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳು ಇದ್ರು‌. ಇಲ್ಲಿಗೆ ಬಂದು ಅಶಿರ್ವಾದ ಪಡೆದುಕೊಂಡು ಹೋಗಿದ್ದೆ. 2018ರಲ್ಲೂ ಸಚಿವನಾಗೋಕೆ ದೇವರು ಅವಕಾಶ ಮಾಡಿಕೊಟ್ಟಿದ್ದ. ಆಗಲೂ ಸ್ವಾಮೀಜಿಗಳ ಅಶಿರ್ವಾದ ಪಡೆದುಕೊಂಡು ಹೋಗಿದ್ದೆ. ಇವತ್ತು ಮಂತ್ರಿಯಾಗಿದಿನಿ, ಇವತ್ತು ಬಂದು ಸ್ವಾಮೀಜಿಗಳ ಅಶಿರ್ವಾದ ಪಡೆದುಕೊಂಡಿದ್ದೇನೆ ಎಂದು ಮಠಕ್ಕೆ ಭೇಟಿ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಸಿದ್ದಗಂಗಾ ಮಠದ 10 ಕೋಟಿ ಅನುದಾನ ತಡೆಹಿಡಿಯುವ ಧಮ್ಮು ಸರ್ಕಾರಕ್ಕೆ ಇಲ್ಲ : ಶಾಸಕ ಬಿ. ಸುರೇಶ್ ಗೌಡ

10 ಸಾವಿರ ಮಕ್ಕಳನ್ನ ಇಟ್ಟುಕೊಂಡಿದ್ದಾರೆ

ನಾನು ಯಾವಾಗ ಯಾವಾಗ ಮಂತ್ರಿಯಾಗಿದ್ದೀನಿ, ಆಗೆಲ್ಲಾ ಮಠಕ್ಕೆ ಬಂದು ಅಶಿರ್ವಾದ ಪಡೆದುಕೊಂಡಿದ್ದೇನೆ. ಸ್ವಾಮೀಜಿ ಬಳಿ ಇಲ್ಲಿನ ವ್ಯವಸ್ಥೆ ಬಗ್ಗೆ ಮಾತನಾಡಿದ್ದೇನೆ. ಕಳೆದ ವರ್ಷ 10 ಸಾವಿರ ಮಕ್ಕಳು ಇದ್ರಂತೆ. ಈ ವರ್ಷ ದಾಖಲಾತಿ (ಅಡ್ಮೀಶನ್) ಜಾಸ್ತಿ ಬರ್ತಿದೆಯಂತೆ. ಅದಕ್ಕೆಲ್ಲಾ ಸಿದ್ಧತೆ (ಅರೆಂಜ್ಮೆಂಟ್) ಮಾಡ್ಕೋಬೇಕಾಗುತ್ತೆ. ಈಗ ಸದ್ಯಕ್ಕೆ ಇಲ್ಲಿ 10 ಸಾವಿರ ಮಕ್ಕಳನ್ನ ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ನಾನು ಕೂಡಾ ಶ್ರೀಗಳ ಬಳಿ ಮನವಿ ಮಾಡಿದ್ದೇನೆ. ಬರುವ ವರ್ಷ ಇಲ್ಲಿ ಹೆಚ್ಚಿನ ಕಟ್ಟಡ ನಿರ್ಮಿಸಿ ಹೆಚ್ಚಿನ ಮಕ್ಕಳಿಗೆ ಶಿಕ್ಷಣ ಕೊಡಿ ಅಂತ ಹೇಳಿದ್ದೇನೆ. ಇಲ್ಲಿ ಲಕ್ಷಾಂತರ ಜನ ಬಂದು ಊಟ ಮಾಡ್ತಾರೆ. ಯಾರಿಗೂ ಇಲ್ಲಿ ಊಟ ಇಲ್ಲ ಅಂತ ಸಮಸ್ಯೆಯಾಗಿಲ್ಲ. ಇಲ್ಲಿ 10 ಸಾವಿರ ಮಕ್ಕಳಿಗೆ ವ್ಯವಸ್ಥೆ ಮಾಡೋದು ಸ್ವಲ್ಪ ಕಷ್ಟ ಆಗಿರೋದು. ಈ ವರ್ಷ ಇಲ್ಲಿ ಓದೋಕೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಬರುವ ವರ್ಷ ಹೆಚ್ಚಿನ ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಿಕೊಡುತ್ತೇವೆ ಅಂತ ಹೇಳಿದ್ದಾರೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES