Friday, May 17, 2024

ಕರುನಾಡಲ್ಲಿ ‘ಕೈ’ ಗೆಲುವಿಗೆ ಪ್ರಿಯಾಂಕಾ ಪ್ರಾರ್ಥನೆ

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣಾ ಮತ ಎಣಿಕೆ ಕಾರ್ಯ ಬಹಳ ಬಿರುಸಿನಿಂದ ಸಾಗುತ್ತಿದೆ. ಕಾಂಗ್ರೆಸ್ ಪಕ್ಷ ಸರಳ ಬಹುಮತದತ್ತ ಸಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪಕ್ಷದ ಗೆಲುವಿಗಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶಿಮ್ಲಾದ ಜಖುವಿನ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 110 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ಆಯೋಗ ಅಧಿಕೃತವಾಗಿ ತಿಳಿಸಿದೆ. ಬಿಜೆಪಿ-73, ಜೆಡಿಎಸ್-24 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಪಕ್ಷೇತರರು-3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ವರುಣಾದಲ್ಲಿ ಸಿದ್ದರಾಮಯ್ಯ ಮುನ್ನಡೆ

ಸಿದ್ದರಾಮಯ್ಯ- 6576

ವಿ.ಸೋಮಣ್ಣ- 3866

ಕೃಷ್ಣರಾಜ ಮತಕ್ಷೇತ್ರಬಿಜೆಪಿಯ ಶ್ರೀವತ್ಸ ಮುನ್ನಡೆ

ಶ್ರೀವತ್ಸ- 2098 ಮತಗಳ ಮುನ್ನಡೆ

ಎಂ.ಕೆ.ಸೋಮಶೇಖರ್- 6415

ಬಿಜೆಪಿಯ ಶ್ರೀವತ್ಸಗೆ-8513

ನಂಜನಗೂಡು ಕಾಂಗ್ರೆಸ್ ದರ್ಶನ್ ಮುನ್ನಡೆ

ಬಿಜೆಪಿ ಹರ್ಷವರ್ಧನ್​ ಹಿನ್ನಡೆ

ಹೆಚ್​.ಡಿ.ಕೋಟೆ ಕಾಂಗ್ರೆಸ್​ ಅನಿಲ್ ಮುನ್ನಡೆ

ಜಮೀರ್​​ 20 ಸಾವಿರ ಮತಗಳಿಂದ ಮುನ್ನಡೆ

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜಮೀರ್​ ಅಹ್ಮದ್​ ಖಾನ್​ 20 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಜಯನಗರ ಕಾಂಗ್ರೆಸ್ ಸೌಮ್ಯಾರೆಡ್ಡಿ ಹಿನ್ನಡೆ.

ಮಹದೇವಪುರ ಬಿಜೆಪಿಯ ಮಂಜುಳಾ ಮುನ್ನಡೆ.

ಶಿವಾಜಿನಗರ ಕಾಂಗ್ರೆಸ್ ರಿಜ್ವಾನ್​ ಮುನ್ನಡೆ.

ಪದ್ಮನಾಭನಗರ ಬಿಜೆಪಿ ಆರ್​.ಅಶೋಕ್ ಮುನ್ನಡೆ

RELATED ARTICLES

Related Articles

TRENDING ARTICLES