Friday, May 17, 2024

ನನ್ನ ‘ಉಸಿರು ಇರೋವರೆಗೂ ವರುಣ ಜನರನ್ನು ಕೈಬಿಡಲ್ಲ’ : ಬಿ.ವೈ ವಿಜಯೇಂದ್ರ

ಬೆಂಗಳೂರು : ವರುಣ ಕ್ಷೇತ್ರದ ಜನರನ್ನು ಯಾವಾಗ ನೋಡುತ್ತೇನೆ ಅಂತಾ ಹಂಬಲಿಸುತ್ತೇನೆ. ನನ್ನ ಉಸಿರು ಇರುವವರೆಗೂ ವರುಣ ಕ್ಷೇತ್ರದ ಜನರ ಕೈ ಬಿಡಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಭರವಸೆ ನೀಡಿದ್ದಾರೆ.

ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ಮಾತನಾಡಿದ ಅವರು, ಮೇ 13ರಂದು ಕಾಂಗ್ರೆಸ್, ಜೆಡಿಎಸ್​ಗೆ ದೊಡ್ಡ ಆಘಾತ ಕಾದಿದೆ. ಪಕ್ಷಕ್ಕಾಗಿ ಹಗಲಿರುಳು ಎಲ್ಲರೂ ದುಡಿಯೋಣ. ಈ ಬಾರಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಯಾವ ದುಷ್ಟ ಶಕ್ತಿಯೂ ಇದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ‌ ಬರಬೇಕು ಎಂಬುದು ಯಡಿಯೂರಪ್ಪ ಅವರ ಕನಸು. ರಾಜ್ಯ ಹಾಗೂ ಕೇಂದ್ರದ ಕಾರ್ಯಕ್ರಮಗಳ ಫಲದಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಇದನ್ನು ಯಾವ ದುಷ್ಟ ಶಕ್ತಿ ತಡೆಯಲು ಸಾಧ್ಯವಿಲ್ಲ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಈಶ್ವರಪ್ಪಗೆ ಮೋದಿ ದೂರವಾಣಿ ಕರೆ : ಯಡಿಯೂರಪ್ಪ ಏನಂದ್ರು?

ಸೋಮಣ್ಣ ಗೆಲುವಿಗೆ ಹಗಲಿರುಳು ಶ್ರಮ

ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ಅದಕ್ಕಾಗಿ ಡಾ. ರೇವಣ್ಣ ಅವರನ್ನು ಗೆಲ್ಲಿಸಿ. ಟಿ ನರಸೀಪುರದಲ್ಲಿ ಯಾರು ಯಾರನ್ನೋ ಗೆಲ್ಲಿಸುತ್ತೀರಾ? ಟಿ ನರಸೀಪುರದ ಅಭಿವೃದ್ಧಿಗೆ ಡಾ. ರೇವಣ್ಣ ಅವರಿಗೆ ಮತ ನೀಡಿ. ಹಗಲು ರಾತ್ರಿ ಕೆಲಸ ಮಾಡಿದರೆ ಸೋಮಣ್ಣ ಗೆಲ್ಲಿಸಬಹುದು ಎಂದು ಹೇಳಿದ್ದಾರೆ.

ದೇಶದಲ್ಲಿ ಕಾಂಗ್ರೆಸ್ ದಿವಾಳಿಯಾಗಿದೆ

ಕಾಂಗ್ರೆಸ್ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದೆ. ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ದಿವಾಳಿಯಾಗಿದೆ. ರಾಜ್ಯದಲ್ಲಿ ಸ್ವಲ್ಪ ಉಸಿರಾಡುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಮೇ 13ಕ್ಕೆ ದೊಡ್ಡ ಆಘಾತ ಕಾದಿದೆ. ಜೆಡಿಎಸ್ ಯಾರು ಮೆಜಾರಿಟಿ ಬರಬಾರದು ಅಂತಾ ಕನಸು ಕಾಣುತ್ತಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಇದ್ದರೆ ಮಾತ್ರ ಅಭಿವೃದ್ಧಿ ಕೆಲಸ ಸಾಧ್ಯ ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES