Tuesday, May 21, 2024

ಅಕ್ಷಯ ತೃತೀಯ ಯಾವಾಗ, ಹೇಗೆ ಆಚರಿಸಬೇಕು? : ಇಲ್ಲಿದೆ ನೋಡಿ ಮಾಹಿತಿ

ಬೆಂಗಳೂರು : ಅಕ್ಷಯ ತೃತೀಯವು ದೇಶದಾದ್ಯಂತ ಹಿಂದೂಗಳು ಆಚರಿಸುವ ಅತ್ಯಂತ ಪವಿತ್ರ ಮತ್ತು ಮಂಗಳಕರ ಹಬ್ಬಗಳಲ್ಲಿ ಒಂದಾಗಿದೆ. ಈ ದಿನದಂದು ಪ್ರಾರಂಭಗೊಳ್ಳುವ ಯಾವುದೇ ಕಾರ್ಯವು ಯಾವಾಗಲೂ ಯಶಸ್ವಿಯಾಗುತ್ತದೆ ಎಂಬ ನಂಬಿಕೆಯಿದೆ.

ಈ ದಿನವು ಅದೃಷ್ಟ, ಯಶಸ್ಸು ಮತ್ತು ಅದೃಷ್ಟದ ಲಾಭದ ಸಂಕೇತವಾಗಿದೆ. ಅಕ್ಷಯ ತೃತೀಯ ಯಾವಾಗ, ಹೇಗೆ ಆಚರಿಸಬೇಕು?ಎನ್ನುವುದರ ಕುರಿತು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಶಾಸ್ತ್ರದ ಪ್ರಕಾರ ರವಿಯು ಮೇಷದಲ್ಲಿ ಚಂದ್ರನು ವೃಷಭದಲ್ಲಿ ಉಚ್ಛಸ್ಥಾನದಲ್ಲಿ ಇರುವಾಗ ವೈಶಾಖ ಮಾಸದ ಶುದ್ಧ ತೃತೀಯ ತಿಥಿಯನ್ನು ಅಕ್ಷಯ ತೃತೀಯ ಎನ್ನುತ್ತಾರೆ ಎಂದು ಶ್ರೀಗಳು ತಿಳಿಸಿದ್ದಾರೆ.

ಅಕ್ಷಯ ತೃತೀಯದಂದು ನಾವು ಮಾಡಬೇಕಾದ ಕಾರ್ಯಗಳು

ಅಕ್ಷಯ ತೃತೀಯದಂದು ನಾವು ಏನನ್ನು ಮಾಡಬಾರದು

ಅಕ್ಷಯ ತೃತೀಯದಂದು ಏನನ್ನು ಮಾಡಬೇಕು

 

ಇದನ್ನೂ ಓದಿ : ಕಂಟಕ ರಾಹುಗ್ರಸ್ತ ಸೂರ್ಯಗ್ರಹಣ : ನಿಮ್ಮ ರಾಶಿಗಳ ಗ್ರಹಣದ ಫಲಾಫಲ ಇಲ್ಲಿದೆ ನೋಡಿ

ಈ ವರ್ಷ ಸಿಕ್ಕಿರುವ ಎರಡು ದಿನದಲ್ಲಿ ಎಲ್ಲರೂ ಅಕ್ಷಯವಾದಂತಹ ಮನಸ್ಸಿನಿಂದ ಧರ್ಮವನ್ನು ಅಕ್ಷಯಗೊಳಿಸಿ, ಮೇಲೆ ತಿಳಿಸಿದ ಕಾರ್ಯಗಳನ್ನು ಪಾಲಿಸಸಬೇಕು. ಶ್ರೀಪೀಠದಲ್ಲಿ ನಡೆಯುವ ಗಜಲಕ್ಷ್ಮೀಯ ಯಾಗದಲ್ಲಿ ಭಾಗವಹಿಸಿ ಅಕ್ಷಯದ ಪ್ರಸಾದವನ್ನು ಸ್ವೀಕರಿಸಿ ಅಕ್ಷಯವಾದ ಪುಣ್ಯ ಸಂಪಾದಿಸಿರಿ ಎಂದು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES