Saturday, April 20, 2024

ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ : ಬಿಜೆಪಿ ಪಾಳಯದಲ್ಲಿ ಶುರುವಾಯ್ತು ಟಿಕೆಟ್ ಟೆನ್ಷನ್

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹಿತವಾಗಿದೆ. ರಾಜಕೀಯ ಪಕ್ಷಗಳು 224 ಕ್ಷೇತ್ರಗಳಿಗೆ ಟಿಕೆಟ್​​​ ಫೈನಲ್​ ಮಾಡುವ ತಯಾರಿಯಲ್ಲಿದ್ದಾರೆ. ಈಗಾಗಲೇ ಕಾಂಗ್ರೆಸ್​ ಮತ್ತು ಜೆಡಿಎಸ್ ಟಿಕೆಟ್​ ಮೊದಲ ಪಟ್ಟಿಯನ್ನು ಘೋಷಿಸಿದ್ದು, ಬಿಜೆಪಿ ಒಂದೂ ಕ್ಷೇತ್ರಕ್ಕೂ ಟಿಕೆಟ್​​ ಘೋಷಿಸಿಲ್ಲ.

ಹೌದು, ಇದೀಗ ಬಿಜೆಪಿ ಪಾಳಯದಲ್ಲಿ ಟಿಕೆಟ್​ ಟೆನ್ಷನ್​​ ಜೋರಾಗಿದೆ. ಅಭ್ಯರ್ಥಿಗಳ ಆಯ್ಕೆ ಗೊಂದಲ ಬಗೆಹರಿಸಲು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್​​​ ಶಾ ಎಂಟ್ರಿ ಕೊಟ್ಟಿದ್ದಾರೆ.

ರಾಜ್ಯಕ್ಕೆ ಗೃಹ ಸಚಿವ ಅಮಿತ್​ ಶಾ ಏಪ್ರಿಲ್​ 1ಕ್ಕೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಏಪ್ರಿಲ್ 1 ರಿಂದ 4ರವರೆಗೆ ಅಮಿತ್ ಶಾ ಮೆಗಾ ಮೀಟಿಂಗ್ ಮಾಡಲಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಅಮಿತ್ ಶಾ ಸಭೆ ನಡೆಸಲಿದ್ದಾರೆ. ಚುನಾವಣಾ ಚಾಣಕ್ಯ ಸಂಭಾವ್ಯರ ಪಟ್ಟಿ ಪರಿಶೀಲನೆ ನಡೆಸಲಿದ್ದಾರೆ. ಅಮಿತ್ ಶಾ ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲಿದ್ದಾರೆ.

ಏ. 5 ರಂದು ಕೋಲಾರದಲ್ಲಿ ‘ಕೈ’ಕಹಳೆ

ಏಪ್ರಿಲ್ 5 ರಂದು ಕೋಲಾರದಲ್ಲಿ ಕಾಂಗ್ರೆಸ್ ಕಹಳೆಗೆ ಸಿದ್ಧತೆ ಮಾಡಿಕೊಂಡಿದೆ. ಕೋಲಾರದಲ್ಲಿ ಸಮಾವೇಶಕ್ಕೆ ಕೈ ಪಡೆ ಭಾರೀ ಸಿದ್ಧತೆ ಮಾಡಿಕೊಂಡಿದೆ. ‘ಸತ್ಯಮೇವ ಜಯತೇ’ ಹೆಸರಿನಲ್ಲಿ ಕಾಂಗ್ರೆಸ್ ಸಮಾವೇಶ ಮಾಡುತ್ತಿದ್ದು, ಈ ಸಮಾವೇಶಕ್ಕೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಬರಲಿದ್ದಾರೆ. ಇಡೀ ಸಮಾವೇಶ ರಾಹುಲ್ ಗಾಂಧಿ ಮೇನಿಯಾವಾಗಲಿದೆ. 2019 ರಲ್ಲಿ ಕೋಲಾರದಿಂದಲೇ ಮೋದಿ ವಿರುದ್ಧ ಗುಡುಗಿದ್ದ ರಾಹುಲ್, ಇದೀಗ ಈ ಕಾರಣಕ್ಕಾಗಿಯೇ ಸಂಸದ ಸ್ಥಾನ ರದ್ದಾಗಿದೆ.

ಕೋಲಾರ ಕ್ಷೇತ್ರದಿಂದಲೇ ಚುನಾವಣಾ ರಣಕಹಳೆ ಮೊಳಗಿಸಲು ಕಾಂಗ್ರೆಸ್​​​​​ ಸಿದ್ಧತೆ ಮಾಡಿಕೊಂಡಿದೆ. ಐದು ಲಕ್ಷ ಜನರನ್ನ ಸೇರಿಸಿ ಭಾರೀ ಸಮಾವೇಶ ನಡೆಸಲು ಕಾಂಗ್ರೆಸ್​​ ತಯಾರಿ ನಡೆಸಿದ್ದು, ಅಂದೇ ಸಿದ್ದು ಕೋಲಾರ ಸ್ಪರ್ಧೆ ಬಗ್ಗೆಯೂ ಘೋಷಣೆ ಸಾಧ್ಯತೆಯಿದೆ.

RELATED ARTICLES

Related Articles

TRENDING ARTICLES