Monday, May 20, 2024

ಬಿಜೆಪಿಯ ಕಾರ್ಯಕರ್ತರಿಗೆ ಬಿಬಿಎಂಪಿ ಐಡಿ ನೀಡಿ ಮತದಾರರ ಮಾಹಿತಿ ಕಳವು

ಬೆಂಗಳೂರು: ಬಿಜೆಪಿಯ ಕಾರ್ಯಕರ್ತರಿಗೆ ಸರ್ಕಾರದಿಂದ ಬಿಬಿಎಂಪಿ(ಬೆಂಗಳೂರು ಮಹಾನಗರ ಪಾಲಿಕೆ) ಐಡಿ ಕಾರ್ಡ್ ಕೊಟ್ಟು  ಬಿಬಿಎಂಪಿ ವ್ಯಾಪ್ತಿಯ ಮತದಾರರ ಮಾಹಿತಿ ಕಳವು ಮಾಡಲಾಗಿದೆ ಎಂದು ಡಿ.ಕೆ ಶಿವಕುಮಾರ್ ಅವರು ಆರೋಪಿಸಿದರು.

ಬೆಂಗಳೂರಿನ ರಾಜ್ಯ ಕಾಂಗ್ರೆಸ್​ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್​ ಉಸ್ತವಾರಿ ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಸೇರಿದಂತೆ ಇನ್ನೀತರ ನಾಯಕರು ಸೇರಿ ಇಂದು ಜಂಟಿಯಾಗಿ ಸುದ್ದಿಘೋಷ್ಠಿ ನಡೆಸಿದರು.

ಈ ವೇಳೆ ಮಾತನಾಡಿದ ಡಿಕೆಶಿ, ಕಳೆದ ಕೆಲವು ತಿಂಗಳಿನಿಂದ ಸರ್ಕಾರಿ ಅಧಿಕಾರಿಗಳ ಎಂದು ಬಿಬಿಎಂಪಿ ವ್ಯಾಪ್ತಿಯ ಮತದಾರರ ಮಾಹಿತಿ ಸಂಗ್ರಹಿಸಿ ಸಮೀಕ್ಷೆ ನಡೆಸಲಾಗಿದೆ. ಇದನ್ನ ಕಳೆದ ಎರಡು ತಿಂಗಳಿಂದ ಈ ಅಕ್ರಮದ ಬಗ್ಗೆ ಮಾಹಿತಿ ಕಲೆಹಾಕಿದ್ದೆವು. ಗುತ್ತಿಗೆಯಲ್ಲಿ ಅಕ್ರಮ ನೋಡಿದ್ದೆವು, ಆದ್ರೆ ಈ ರೀತಿಯ ಅಕ್ರಮ ನೋಡಿರಲಿಲ್ಲ ಎಂದರು.

ಮತದಾರರ ಮಾಹಿತಿ ಕಳವು ಮಾಡಲು 18 ಸಾವಿರ ಕಾರ್ಯಕರ್ತರನ್ನ ಬಳಸಲಾಗಿದೆ. ತಮ್ಮವರನ್ನ ಗೆಲ್ಲಿಸಲು ಈ ಪ್ರಯತ್ನ ಮಾಡಲಾಗಿದೆ. ಯಾವುದೋ ಒಬ್ಬ ‌ಸಚಿವರ ಮಾತನ್ನ ಕೇಳಿ ಸಿಎಂ ಈ ಸಾಹಸಕ್ಕೆ ಕೈ ಹಾಕಿದ್ದಾರೆ. ನಿನ್ನೆ ಖಾಸಗಿ ಸಂಸ್ಥೆಗೆ ಕೊಟ್ಟಿರೋ ಆದೇಶವನ್ನು ವಾಪಾಸ್ಸ್ ಪಡೆದಿದ್ದಾರೆ. ಯಾಕೆ ವಾಪಾಸ್ಸು ಪಡೆದಿದ್ದಿರಿ? ಅಕ್ರಮ ಎಸೆಗಿದ್ರೆ ಎಫ್ ಐ ಆರ್ ಎಲ್ಲಿ ದಾಖಲಿಸಿದ್ದಿರಿ? ಮತದಾರರ ಮಾಹಿತಿಯನ್ನು ತಿದ್ದುಪಡಿ ‌ಮಾಡಲಾಗಿದೆ. ಇನ್ನು ನಕಲಿ‌ ಮತದಾರರನ್ನು ಸೇರಿಸಲಾಗಿದೆ. ದಲಿತರ, ಅಲ್ಪಸಂಖ್ಯಾತರ ಮತಗಳನ್ನು ಕಿತ್ತುಹಾಕಲಾಗಿದೆ ಎಂದು ಡಿಕೆಶಿ ಆರೋಪಿಸಿದರು.

RELATED ARTICLES

Related Articles

TRENDING ARTICLES