ಬೀದರ: ದಾಸ ಶ್ರೇಷ್ಠ ದಾರ್ಶನಿಕ ಕನದಾಸರ ಜಯಂತಿ ಪ್ರಯುಕ್ತ ನಗರದ ಬೋಮ್ಮಗೋಂಡೆಶ್ವರ ವೃತದಿಂದ ಭವ್ಯ ಮೆರವಣಿಗೆ ನೆರವೆರಲಾಯಿತು.
ಅಲಂಕರಿತ ಹೂವಿನ ಸಾರೋಟಿಯಲ್ಲಿ ಕನಕದಾಸರ ಭಾವಚಿತ್ರ ಕ್ಕೆ ಪೂಜೆ ಸಲಿಸಿ ಡೊಳ್ಳು ಬಾರಿಸುವ ಮೂಲಕ ಮೆರವಣಿಗೆ ಚಾಲನೆ ನೀಡಿದ ಶಾಸಕ ಬಂಡೆಪ್ಪಾ ಖಾಶೆಂಪುರ ಅವರು ಬಳಿಕ ಬೀದರ ಉತ್ತರ ಕ್ಷೇತ್ರದ ಶಾಸಕ ರಹೀಂಖಾನ. ಡೊಳ್ಳು ಭಾರಿಸಿ ಸ್ಟೆಪ್ ಹಾಕಿದರು.
ಸಮಾಜದ ಅಂಕುಡೊಂಕು ತಿದ್ದಿ. ಸಮಾನತೆಯ ಸಂದೇಶ ಸಾರಿದ ಕನಕದಾಸರ ಬದುಕೇ ನಮಗೆ ಆದರ್ಶ ಎಂದ ಶಾಸಕ ಬಂಡೆಪ್ಪಾ ಖಾಶೆಂಪುರ ಹೇಳಿದರು. ಈ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಭಾಗಿ, ಕೋಲಾಟ, ವೀರಗಾಸೆ ಕುಣಿತ, ಡೊಳ್ಳು ಕುಣಿತ, ಲಮಾಣಿ ಕುಣಿತ ಎಲ್ಲರ ಗಮನ ಸೆಳೆದವು.
ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಗೋವಿಂದ ರಡ್ಡಿ. ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಡಿ ಕೀಶೋ ಬಾಬು.ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿಲ್ಪಾ ಎಂ . ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಸೇರಿದಂತೆ ಹಲವರು ಭಾಗಿಯಾಗಿದ್ದರು.