Monday, May 20, 2024

ಇಂದು ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಲಿರುವ ಸಿಎಂ..!

ಬೆಳಗಾವಿ: ಇಂದು ಬೆಳಗಾವಿ ಜಿಲ್ಲೆಗೆ ಸಿಎಂ ಭೇಟಿನಿಡಿದ್ದಾರೆ. ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಸಿಎಂ ಭಾಗಿ. ರಾಯಬಾಗ ಹಾಗೂ ಖಾನಾಪೂರದಲ್ಲಿ ಆಯೋಜಿಸಿರುವ ಸಂಕಲ್ಪ ಯಾತ್ರೆ. ಮಧ್ಯಾಹ್ನ 12:25 ಕ್ಕೆ ರಾಯಬಾಗ ಪಟ್ಟಣಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿಲಿರುವ ಸಿಎಂ. ಬಳಿಕ ಸ್ಥಳೀಯ ಬಿಜೆಪಿ ನಾಯಕ ಅಮರಸಿಂಹ ಪಾಟೀಲ್ ಅವರ ಪುತ್ರನ ಮದುವೆಯಲ್ಲಿ ಭಾಗಿಯಾಗಲಿದ್ದಾರೆ.

ರಾಯಬಾಗ ಪಟ್ಟಣದ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಲಿದ್ದು, ಅಲ್ಲಿಂದ ಬೈಕ್ ರ್ಯಾಲಿ ಮೂಲಕ ಜನ ಸಂಕಲ್ಪ ಯಾತ್ರೆ ವೇದಿಕೆ ಬರಲಿರುವ ಸಿಎಂ. ಮಧ್ಯಾಹ್ನ 1 ಗಂಟೆಗೆ ಜನ ಸಂಕಲ್ಪ ಸಮಾವೇಶದಲ್ಲಿ ಭಾಗಿ.

ರಾಯಬಾಗ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಸಮಾವೇಶ. ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣ. ಸಿಎಂ ಬೊಮ್ಮಾಯಿ ಅವರಿಗೆ ಸಾಥ್ ನೀಡಲಿರುವ ಸಚಿವರಾದ ಗೊವಿಂದ ಕಾರಜೋಳ,ಶ್ರೀರಾಮುಲು, ಭೈರತಿ ಬಸವರಾಜ, ಶಶಿಕಲಾ ಜೊಲ್ಲೆ
ಸಮಾವೇಶದ ಬಳಿಕ ಖಾನಾಪೂರಕ್ಕೆ ತೆರಳಲಿರುವ ಸಿಎಂ.

RELATED ARTICLES

Related Articles

TRENDING ARTICLES