Monday, September 23, 2024

ಚಿರತೆ ಸೆರೆಗೆ ನಿಟ್ಟುಸಿರುಬಿಟ್ಟ ಕೆ.ಆರ್.ನಗರ ನಿವಾಸಿಗಳು

ಮೈಸೂರು: ಇತ್ತೀಚೆಗೆ ರಾಜ್ಯದಲ್ಲಿ ಚಿರತೆ ದಾಳಿ ಹೆಚ್ಚಾಗಿದೆ. ಇನ್ನು ಮೈಸೂರಿನ ಕೆ.ಆರ್.ನಗರದಲ್ಲಿ ಜನರ ಮೇಲೆ ಚಿರತೆ ದಾಳಿ ಪ್ರಕರಣಕ್ಕೆ ಕೆ.ಆರ್.ನಗರದ ನಿವಾಸಿಗಳು ಬಯಬೀತರಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಕೆಆರ್.ನಗರ ಪಟ್ಟಣದಲ್ಲಿ ಓಡಾಡಿಕೊಂಡಿದ್ದ ಚಿರತೆ ಸಾರ್ವಜನಿಕರಲ್ಲಿ ಬಯಬೀಳುಸುವಂತಾಗಿತ್ತು. ತಲೆ ನೋವಾಗಿದ್ದ ಚಿರತೆ ಕಡೆಗೂ ಸೆರೆಯಾಗಿದೆ. ಇನ್ನು ಪಟ್ಟಣದ 18 ನೇ ವಾರ್ಡ್‌ನಲ್ಲಿ ಚಿರತೆ ಸೆರೆಯಾಗಿದೆ. ಅರವಳಿಕೆ ಮದ್ದು ನೀಡಿ ಚಿರತೆ ಸೆರೆ‌ಹಿಡಿದ ಅರಣ್ಯ ಇಲಾಖೆ ಅಧಿಕಾರಿಗಳು. ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಮೈಸೂರು ಮೃಗಾಲಯ
ಸಿಬ್ಬಂದಿ ಹಾಗೂ ಕೆಆರ್.ನಗರ ಅರಣ್ಯ ವಲಯ ಅಧಿಕಾರಿಗಳು.

ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ಕೆಆರ್.ನಗರ ಪಟ್ಟಣದ ನಾಗರೀಕರು.ಕೆ.ಆರ್ ನಗರದಿಂದ ಮುಳ್ಳೂರಿಗೆ ಹೋಗುವ ರಸ್ತೆಯಲ್ಲಿ ದಾಳಿ ನಡೆಸುತ್ತಿದ್ದ ಚಿರತೆ.

RELATED ARTICLES

Related Articles

TRENDING ARTICLES