Friday, May 17, 2024

ಕನ್ನಡ ರಾಜ್ಯೋತ್ಸವದ ಕಟೌಟ್​​ ಹರಿದ ಕಿಡಿಗೇಡಿಗಳು

ಕಾರವಾರ : ನಿನ್ನೆ ರಾಜ್ಯಾದ್ಯಂತ 67ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಹಾಕಿದ್ದ ಕನ್ನಡ ಕಟೌಟ್​​ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ.

ಕಾರವಾರ ಜಿಲ್ಲೆಯ ಕುಮಟ ಪಟ್ಟಣದಲ್ಲಿ ಈ ಕೃತ್ಯ ಎಸಗಲಾಗಿದೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಪಕ್ಷದ ಮುಖಂಡರು ಶುಭಕೋರಿ ಕಟ್ ಔಟ್ ಹಾಕಿದ್ರು. ಕುಮಟ ಶಾಸಕ ದಿನಕರ ಶೆಟ್ಟಿ ಕಟ್ ಔಟ್ ಹೊರತು ಪಡಿಸಿ ಉಳಿದೆಲ್ಲಾ ಮುಖಂಡರ ಕಟ್ ಔಟ್​​ಗಳನ್ನು ಕಿತ್ತು ಕಸದ ಬುಟ್ಟಿಗೆ ಹಾಕಿ ಕಿಡಿಗೇಡಿಗಳು ದರ್ಪ ಮೆರೆದಿದ್ದಾರೆ.

ಇನ್ನು, ಹಾಲಿ ಶಾಸಕರ ಬೆಂಬಲಿಗರೇ ಈ ಕೃತ್ಯ ನಡೆಸಿರುವ ಬಗ್ಗೆ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್​​ ಪಟಗಾರ ಅನುಮಾನ ವ್ಯಕ್ತಪಡಿಸಿದ್ದಾರೆ. ಕನ್ನಡ ರಾಜ್ಯೋತ್ಸವದ ಕಟ್ ಔಟ್​​​ಗಳಿಗೆ ಅವಮಾನ ಮಾಡಿದವರ ವಿರುದ್ಧ ಕ್ರಮಕ್ಕೆ ಕರವೇ ಒತ್ತಾಯಿಸಿದೆ.

RELATED ARTICLES

Related Articles

TRENDING ARTICLES