Monday, May 20, 2024

ಅಕ್ಕಿ ಮೂಟೆ ಇಳಿಸಲು ಹೋಗಿದ್ದ ಇಬ್ಬರು ಮಹಿಳೆಯರ ಸಾವು.!

ಚಿಕ್ಕಬಳ್ಳಾಪುರ; ಅಕ್ಕಿ ಮೂಟೆ ಇಳಿಸಲು ಹೋಗಿದ್ದ ಇಬ್ಬರು ಹೆಣ್ಣು ಮಹಿಳೆಯರು ಸಾವನ್ನೊಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 44 ರ ಶೆಟ್ಟಿಗೆರೆ ಕ್ರಾಸ್ ಬಳಿ ನಡೆದಿದೆ.

ಮಹಿಳೆಯರು ಶಬರಮ್ಮ(22) ನಾಗಮ್ಮ(60) ಪ್ರಾಣ ಕಳೆದುಕೊಂಡಿದ್ದಾರೆ. ಮೃತರು ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ನಿರ್ಜಾಪುರ ನಿವಾಸಿಗಳೆಂದು ಗುರುತಿಸಲಾಗಿದೆ.

ಇಬ್ಬರು ಮಹಿಳೆಯರು ಕೂಲಿ ಕೆಲಸ ಹರಸಿ ಬೆಂಗಳೂರಿಗೆ ಬರುತ್ತಿದ್ದರು. ಈ ವೇಳೆ ಮಳೆ ಬೀಳ್ತಿದೆ ಅಂತ ಹೈವೇ ಪಕ್ಕ ಟವೇರಾ ಕಾರು ನಿಲ್ಲಿಸಿ ಅಕ್ಕಿ ಮೂಟೆ ಮಹಿಳೆಯರು ಇಳಿಸುತ್ತಿದ್ದರು. ಈ ಸಮಯದಲ್ಲಿ ಏಕಾಏಕಿ ಹೈವೇ ಬದಿಯಲ್ಲಿದ್ದ ಮಹಿಳೆಯರಿಗೆ ಎರ್ಟಿಗಾ ಕಾರು ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

RELATED ARTICLES

Related Articles

TRENDING ARTICLES