ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಇಂದು ಬುಲ್ಡೋಜರ್ಸ್ ಘರ್ಜಿಸಲಿದ್ದು, ಬೆಂಗಳೂರಿನ 8 ವಲಯಗಳ ಪೈಕಿ ಮಹದೇವಪುರದಿಂದ ತೆರವು ಕಾರ್ಯ ಮುಂದುವರೆಯಲಿದೆ.
ನಗರದಲ್ಲಿ ಕಳೆದ ಕೆಲ ದಿನಗಳಿಂದ ತಣ್ಣಗಾಗಿದ್ದ ಒತ್ತುವರಿ ತೆರವು ಕಾರ್ಯಾಚರಣೆ ದೊಡ್ಡವರ ಮನೆಯಿಂದಲೇ ಒತ್ತುವರಿ ತೆರವು ಕಾರ್ಯ ಆರಂಭವಾಗುತ್ತಾ? ಕುತೂಹಲ ಮೂಡಿಸಿದೆ ಇಂದಿನ ಆಪರೇಷನ್ ಬುಲ್ಡೋಜರ್ ಚಾಪ್ಟರ್-2 ಶ್ರೀಮಂತರ ಅಪಾರ್ಟ್ಮೆಂಟ್, ವಿಲ್ಲಾಗಳಿಗೆ ನುಗ್ಗುತ್ತಾ ಪಾಲಿಕೆ ಬುಲ್ಡೋಜರ್? ಬೆಳಗ್ಗೆ 10 ಗಂಟೆ ಬಳಿಕ ರಾಜಕಾಲುವೆ ಒತ್ತುವರಿಗೆ ತೆರವಿಗೆ ನಿರ್ಧಾರ ಮಾಡಿದ್ದು, ಮಹದೇವಪುರದಿಂದ ಒತ್ತುವರಿ ತೆರವು ಕಾರ್ಯಚಾರಣೆ ಆರಂಭಗೊಂಡಲಿದೆ.
ಇನ್ನು, ಬೆಂಗಳೂರಿನ 8 ವಲಯಗಳ ಪೈಕಿ ಮಹದೇವಪುರದಿಂದ ತೆರವು ಕಾರ್ಯಚರಣೆ ಆರಂಭಗೊಳ್ಳಲಿದ್ದು, 22 ಜಾಗಗಳಲ್ಲಿ ಒತ್ತುವರಿ ತೆರವಿಗೆ ತಂದಿದ್ದ ತಡೆಯಾಜ್ಞೆ ವಾಪಸ್ ಪಡೆದಿದ್ದಾರೆ. ರಾಜಕಾಲುವೆ ಒತ್ತುವರಿ ತೆರವು ಮಾಡಲು ಕೋರ್ಟ್ ಅನುಮತಿ ನೀಡಿದ್ದು, ಇಕೋಸ್ಪೇಸ್ ಸೇರಿದಂತೆ ಇತರೆ IT-BT ಕಂಪನಿಯ ಸರ್ವೆ ಕಾರ್ಯ ಅಂತ್ಯಗೊಂಡಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡ ಇಕೋಸ್ಪೇಸ್ಗೆ ಗಂಡಾಂತರ ಎದುರಾಗಿದ್ದು, ಇಕೋಸ್ಪೇಸ್ ಒಳಗಿರುವ 12 ಅಂತಸ್ತಿನ 3 ಕಟ್ಟಡಗಳು ಡೆಮಾಲಿಷನ್ ಫಿಕ್ಸ್ ಆಗಿದೆ. 500 ಮೀಟರ್ ಉದ್ದ ಹಾಗೂ 40-50 ಅಡಿ ಅಗಲದ ರಾಜಕಾಲುವೆ ಒತ್ತುವರಿ ಸಾವಳಕೆರೆಯಿಂದ ಬೆಳ್ಳಂದೂರು ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಈ ಬಾರಿ ದೊಡ್ಡವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಾ ಪಾಲಿಕೆ? ಎಂದು ಕಾದು ನೋಡಬೇಕು.