Monday, May 20, 2024

ಶಿವಮೊಗ್ಗ ನೂತನ SPಯಾಗಿ ಮಿಥುನ್ ಕುಮಾರ್ ಅಧಿಕಾರ ಸ್ವೀಕಾರ.!

ಶಿವಮೊಗ್ಗ : ಶಿವಮೊಗ್ಗ ಎಸ್.ಪಿ. ಲಕ್ಷ್ಮಿಪ್ರಸಾದ್ ವರ್ಗಾವಣೆ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ನೂತನ ಎಸ್.ಪಿ ಮಿಥುನ್ ಕುಮಾರ್ ಅವರು ಇಂದು ಅಧಿಕಾರ ಸ್ವೀಕಾರಿಸಿದರು.

2016 ಬ್ಯಾಚ್ ನ ಕರ್ನಾಟಕ ಕೇಡರ್ ನ ಅಧಿಕಾರಿಯಾಗಿರುವ ಜಿ.ಕೆ. ಮಿಥುನ್ ಕುಮಾರ್, ಈ ಹಿಂದೆ ಬೆಂಗಳೂರಿನಲ್ಲಿ ಸಿಐಡಿ ಎಸ್.ಪಿ.ಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಧಿಕಾರ ಹಸ್ತಾಂತರಿಸುತ್ತಿದ್ದಂತೆ ಎಸ್.ಪಿ. ಡಾ ಬಿ.ಎಂ. ಲಕ್ಷ್ಮೀಪ್ರಸಾದ್ ನಿರ್ಗಮಿತರಾದರು.

2021ರ ಎಪ್ರಿಲ್ ನಿಂದ ಶಿವಮೊಗ್ಗ ಎಸ್.ಪಿ. ಯಾಗಿ ಲಕ್ಷ್ಮೀಪ್ರಸಾದ್ ಕಾರ್ಯನಿರ್ವಹಿಸುತ್ತಿದ್ದರು. ಅ. 3 ರಂದು ಶಿವಮೊಗ್ಗ ಎಸ್.ಪಿ ಲಕ್ಷ್ಮೀಪ್ರಸಾದ್ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಹಿಜಾಬ್, ಕೋಮು ಗಲಾಟೆ, ಕಾನೂನು ಸುವ್ಯವಸ್ಥೆ ಸಮರ್ಥವಾಗಿ ಲಕ್ಷ್ಮೀಪ್ರಸಾದ್ ನಿಭಾಯಿಸಿದ್ದರು. ದೇಶದ ಗಮನ ಸೆಳೆದ ಶಂಕಿತ ಐಸಿಸ್ ಉಗ್ರರ ಪ್ರಕರಣ ಭೇದಿಸುವಲ್ಲಿ ಇವರು ಯಶಸ್ವಿಯಾಗಿದ್ದರು.

RELATED ARTICLES

Related Articles

TRENDING ARTICLES