Friday, May 17, 2024

ಕರುನಾಡಿನಲ್ಲಿ ಕಾಂತಾರ ಕಮಾಲ್..!

ಕರಾವಳಿ ಕಾನನದ ರೋಚಕ ಕಥೆ ಕಾಂತಾರ. ಪ್ರಕೃತಿ ಮತ್ತು ಮಾನವನ ಸಂಘರ್ಷಗಳನ್ನು ಸುಂದರವಾಗಿ ತೆರೆಯ ಮೇಲೆ ತಂದಿರುವ ಮಲ್ಟಿ ಟ್ಯಾಲೆಂಟೆಡ್​​ ನಿರ್ದೇಶಕ ರಿಷಬ್​ ಶೆಟ್ಟಿ. ಕರಾವಳಿ ಮಣ್ಣಿನ ಭಾಷೆ, ಸಂಸ್ಕೃತಿ, ನೆಲದ ಆಚಾರ ವಿಚಾರಗಳನ್ನು ಕಣ್ಣಿಗೆ ಕಟ್ಟಿದಂತೆ ತೋರಿಸಲಾಗಿದೆ.

ಈ ವಾರ ತೆರೆ ಕಂಡಿರುವ ಕನ್ನಡದ ಹೆಮ್ಮೆಯ ಸಿನಿಮಾವಾಗಿ ಅಬ್ಬರಿಸ್ತಾ ಇದೆ. ಎಲ್ಲಾ ಥಿಯೇಟರ್​​ಗಳಲ್ಲೂ ಹೌಸ್​​​ಫುಲ್​ ಪ್ರದರ್ಶನ ಕಾಣ್ತಿದೆ. ರಿಷಬ್​ ಔಟ್​ಸ್ಟಾಂಡಿಂಗ್​ ಆ್ಯಕ್ಟಿಂಗ್ ​​​ಕಂಡು ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದಾರೆ. ಕಾಂತಾರ ಪ್ಯಾನ್​​ ಇಂಡಿಯಾ ಸಿನಿಮಾ ಅಲ್ಲದಿದ್ದರೂ ನ್ಯಾಷನಲ್​ ಅವಾರ್ಡ್​​​​ ನಿರೀಕ್ಷಿಸಬಹುದಾದ ಅದ್ಭುತ ಕಥೆ ಎನ್ನಲಾಗ್ತಿದೆ. ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕಾಂತಾರ ರಾಜ್ಯಾದ್ಯಂತ ಸೆನ್ಸೇಷನ್​ ಕ್ರಿಯೇಟ್​ ಮಾಡುತ್ತಿದೆ.

RELATED ARTICLES

Related Articles

TRENDING ARTICLES