Saturday, May 18, 2024

ರಾಜಕೀಯಕ್ಕೆ ರೀ ಎಂಟ್ರಿಗೆ ಸಜ್ಜಾಗಿರುವ ಗಾಲಿ ಜನಾರ್ಧನ ರೆಡ್ಡಿ

ಬೆಂಗಳೂರು : ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಇಂಡಿಪೆಂಡೆಂಟ್ ಕ್ಯಾಂಡೇಟ್ ಆಗಿ ನಿಲ್ಲಲು ಗಾಲಿ ಜನಾರ್ಧನ ರೆಡ್ಡಿ ಸಿದ್ದತೆ ನಡೆಸುತ್ತಿದ್ದಾರೆ.

ಮಾಜಿ ಸಚಿವರ ಜನಾರ್ದನ ರೆಡ್ಡಿ ಮತ್ತೆ ರಾಜಕೀಯಕ್ಕೆ ರೀ ಎಂಟ್ರಿಯಾಗುತ್ತಿದ್ದು, ಬಿಜೆಪಿಯಲ್ಲಿ ಟಿಕೆಟ್ ಗಾಗಿ ಟ್ರೈ ಮಾಡುತ್ತಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಇಂಡಿಪೆಂಡೆಂಟ್ ಕ್ಯಾಂಡೇಟ್ ಆಗಿ ನಿಲ್ಲಲು ಸಿದ್ಧತೆ ನಡೆಸಿದ್ದು, ಸಿಂಧನೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.

ಇನ್ನು, ಇಂಡಿಪೆಂಡೆಂಟ್ ಆಗಿ ಗೆದ್ದು ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡುವ ಜನಾರ್ದನ ರೆಡ್ಡಿ, ಜನಾರ್ದನ್ ರೆಡ್ಡಿ ರಾಜಕೀಯ ಪ್ರವೇಶ ಬಹುತೇಕ ಫಿಕ್ಸ್ ಆಗಿದ್ದು, ಈಗಾಗಲೇ ಕೆಲವು ಬಿಜೆಪಿ ವರಿಷ್ಠರ ಸಂಪರ್ಕದಲ್ಲಿರುವ ಅವರು, 2023ರ ಸಾರ್ವತ್ರಿಕ ಚುನಾವಣೆಗೆ ರಾಜಕೀಯಕ್ಕೆ ರೀ ಎಂಟ್ರಿ ಆಗಲಿದ್ದಾರೆ. ಪಕ್ಷದ ಟಿಕೆಟ್ ಸಿಗಲಿ,ಬಿಡ್ಲಿ ನನ್ನ ಸ್ಪರ್ಧೆ ಖಚಿತ ಎಂದರು.

RELATED ARTICLES

Related Articles

TRENDING ARTICLES