Friday, May 17, 2024

ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ

ಕಾರವಾರ : ಮೀನುಗಾರಿಕೆಗೆ ಎಂದು ತೆರಳಿದ್ದ ವೇಳೆ ಬೋಟ್ ಮುಳುಗಡೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ಅರಬ್ಬಿ ಸಮುದ್ರದಲ್ಲಿ ‌ನಡೆದಿದೆ.

ಬೋಟ್​ನಲ್ಲಿ ರಂಧ್ರ ಉಂಟಾದ ಪರಿಣಾಮ ನೀರು ತುಂಬಿಕೊಂಡು ಬೋಟ್​ನಲ್ಲಿದ್ದ 30 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಮೀನುಗಾರರು ರಕ್ಷಣೆ ಮಾಡಿದ ಬೋಟ್​ ಅನ್ನು ಕಾರವಾರ ಬಂದರಿಗೆ ತಂದಿದ್ದಾರೆ. ಜಲ ಪದ್ಮಾವತಿ ಎಂಬ ಬೋಟ್ ವಾಮನ ಹರಿಕಾಂತ್ರ ಎಂಬುವವರಿಗೆ ಸೇರಿದೆ. ಈ ಬೋಟ್​ನಲ್ಲಿ 30ಟನ್ ಮೀನುಗಳನ್ನು ಹಿಡಿದು ತರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ ಕಾರಣ ಮೀನುಗಾರರು ಬೋಟ್ ನಲ್ಲಿದ್ದ ಮೀನುಗಳನ್ನು ಸಮುದ್ರಕ್ಕೆ ಚೆಲ್ಲಿದ್ದಾರೆ. ಈ ಘಟನೆಯಿಂದಾಗಿ ₹50 ಲಕ್ಷಕ್ಕೂ ಅಧಿಕ ಹಾನಿಯುಂಟಾಗಿದೆ.

RELATED ARTICLES

Related Articles

TRENDING ARTICLES