Monday, May 20, 2024

ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ; 50 ಲಕ್ಷಕ್ಕೂ ಅಧಿಕ ಹಾನಿ

ಉತ್ತರಕನ್ನಡ; ಮೀನುಗಾರಿಕೆಗೆ ಎಂದು ತೆರಳಿದ್ದ ವೇಳೆ ಬೋಟ್ ಮುಳುಗಡೆಯಾಗಿ ಅಪಾರ ಪ್ರಮಾಣದಲ್ಲಿ ಹಾನಿಗಿಡಾದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ಅರಬ್ಬಿ ಸಮುದ್ರದಲ್ಲಿ ‌ನಡೆದಿದೆ.

ಬೋಟ್ ನಲ್ಲಿ ರಂಧ್ರ ಉಂಟಾದ ಪರಿಣಾಮ ನೀರು ತುಂಬಿಕೊಂಡು ಬೋಟ್​​ನಲ್ಲಿದ್ದ 30 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಮೀನುಗಾರರು ರಕ್ಷಣೆ ಮಾಡಿದ ಬೋಟ್​ನ್ನು ಕಾರವಾರ ಬಂದರಿಗೆ ತಂದಿದ್ದಾರೆ. ಜಲ ಪದ್ಮಾವತಿ ಎಂಬ ಬೋಟ್ ವಾಮನ ಹರಿಕಾಂತ್ರ ಎಂಬುವವರಿಗೆ ಸೇರಿದೆ.

ಈ ಬೋಟ್​ನಲ್ಲಿ ಸುಮಾರು 30ಟನ್ ಮೀನುಗಳನ್ನು ಹಿಡಿದು ತರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ ಕಾರಣ ಮೀನುಗಾರರು ಬೋಟ್ ನಲ್ಲಿದ್ದ ಮೀನುಗಳನ್ನು ಸಮುದ್ರಕ್ಕೆ ಚಲ್ಲಿದ್ದಾರೆ. ಈ ಘಟನೆಯಿಂದಾಗಿ 50 ಲಕ್ಷಕ್ಕೂ ಅಧಿಕ ಹಾನಿಯುಂಟಾಗಿದೆ ಎಂದು ಅಂದಾಜಿಸಲಾಗಿದೆ.

RELATED ARTICLES

Related Articles

TRENDING ARTICLES