ರಾಯಚೂರು : ಶಿಕ್ಷಕನೊಬ್ಬ ವಿದ್ಯಾರ್ಥಿಗೆ ಬಿಸಿನೀರು ಎರಚಿ ವಿಕೃತಿ ಮೆರೆದ ಘಟನೆ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಶಾಲೆಯಲ್ಲಿ ನಡೆದಿದೆ.
ನಗರದಲ್ಲಿ ಶಾಲಾ ಸಮವಸ್ತ್ರದಲ್ಲಿ ಮಲವಿಸರ್ಜನೆ ಮಾಡಿದ್ದಕ್ಕೆ ಶಿಕ್ಷಕನಿಂದ ಈ ರೀತಿ ಶಿಕ್ಷೆ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತರಗತಿಯಲ್ಲೇ ಮಲವಿಸರ್ಜನೆ ಮಾಡಿಕೊಂಡಿದ್ದ 2ನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿಯ ವರ್ತನೆ ಸಹಿಸಲಾಗದೆ ಬಿಸಿನೀರು ಎರಚಿ ವಿಕೃತಿ ಮೆರೆದಿದ್ದಾನೆ.
ಇನ್ನು, ಮಿಟ್ಟೆಕೆಲ್ಲೂರು ಗ್ರಾಮದ ಅಖಿಲ್(8)ಗಾಯಾಳು ಬಾಲಕ, ಬಿಸಿನೀರಿನ ತಾಪಕ್ಕೆ ವಿದ್ಯಾರ್ಥಿಯ ದೇಹ ಶೇ 40% ರಷ್ಟು ಬರ್ನ್ ಆಗಿದೆ. ವೆಂಕಟೇಶ್ ಮತ್ತು ಸುನೀತಾ ದಂಪತಿಯ ಪುತ್ರ ವಿದ್ಯಾರ್ಥಿ ಅಖಿಲ್ ಸಂತೆಕೆಲ್ಲೂರು ಶಾಲೆಗೆ ದಿನನಿತ್ಯ ಕೋಚಿಂಗ್ ಹೋಗುತ್ತಿದ್ದ. ಘಟನೆ ನಡೆದ ಬೆನ್ನಲ್ಲೇ ಶಾಲೆಗೆ ಗೈರಾಗುತ್ತಿರೊ ಹುಲಿಗೆಪ್ಪ. ಸದ್ಯ ಗಾಯಾಳು ಅಖಿಲ್ಗೆ ಲಿಂಗಸುಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ದೂರು ದಾಖಲಿಸದಂತೆ ಪ್ರಭಾವಿಗಳಿಂದ ಬಾಲಕನ ಪೋಷಕರಿಗೆ ಒತ್ತಡ ಹೇರಿದ್ದಾರೆ.