ಕಾರವಾರ: ಕದಂಬ ನೌಕಾನೆಲೆಗೆ ಅಪರಿಚಿತರಿಂದ ಅಕ್ರಮ ಪ್ರವೇಶ ಹಿನ್ನಲೆಯಲ್ಲಿ ಎಂಟು ದಿನದ ಬಳಿಕ ನೌಕಾ ಸೇನಾ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ನೇವಲ್ ಬೇಸ್ ನ ಲೆಫ್ಟಿನೆಂಟ್ ಆಫೀಸರ್ ಕಮಾಂಡಿಂಗ್ ಆಫೀಸರ್ ಅಶುತೋಷ ತಿವಾರಿ ರವರಿಂದ ದೂರು ದಾಖಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅರಗಾ ದಲ್ಲಿರುವ ಕದಂಬ ನೌಕಾನೆಲೆ, ಸೆ.1 ರಂದು ನಾಲ್ಕು ಜನ ಅಪರಿಚಿತರು ನಿಷೇಧಿತ ನೌಕಾ ನೆಲೆಯ ವ್ಯಾಪ್ತಿಯ ಕ್ವಾಡಾ ಬೇ ಬೀಚ್ ಬಳಿ ಇರುವುದು ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ನೌಕಾ ಅಧಿಕಾರಿಗಳು ಹಾಗೂ ಯೂನಿಟ್ ಸೆಕ್ಯೂರಿಟಿ ಟೀಂ ನವರು ಸ್ಥಳಕ್ಕೆ ತೆರಳಿ ಹುಡುಕಿದರೂ ಪತ್ತೆಯಾಗಿರಲಿಲ್ಲ. ಅಪರಿಚಿತರ ಪತ್ತೆಗಾಗಿ ಪೊಲೀಸರ ನೆರವು ನೌಕಾದಳದ ಅಧಿಕಾರಿಗಳು ಕೇಳಿದ್ದರು.