ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮಳೆ ಹೆಚ್ಚಾಗಿ ಹಲವು ಭಾಗಗಳು ಜಲಾವೃತವಾಗಿವೆ. ಈಗಾಗಿ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನೆರೆ ಸಂತ್ರಸ್ತರಿಗೆ ಇಸ್ಕಾನ್ ಅಕ್ಷಯಪಾತ್ರ ಫೌಂಡೇಶನ್ನಿಂದ ಆಹಾರ ಪೂರೈಕೆಯ ಸೇವಾ ಕಾರ್ಯ ಮಾಡುತ್ತಿದೆ. ಬೊಮ್ಮನಹಳ್ಳಿ, ಹೊಂಗಸಂದ್ರ, ದೊಡ್ಡನೆಕ್ಕುಂದಿ, ಬೆಳ್ಳಂದೂರು, ಮುನೇಕೊಳಲ, ನೆಲ್ಲೂರಹಳ್ಳಿ, ಕಾಡುಗೋಡಿ, ಆಡುಗೋಡಿ ಪ್ರದೇಶಗಳಿಗೆ ಊಟ ಪೂರೈಕೆ
ಮಾಡುತ್ತಿದೆ. ಮುನೇಕೊಳಲ ಭಾಗದ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರ ಜೋಪಡಿಗಳು ಜಲಾವೃತಗೊಂಡಿದ್ದವು. ದಿನಸಿಗಳು ನೀರಲ್ಲಿ ಮುಳುಗಿದ್ದವು ಮಳೆಗೆ ಕೆಲಸವಿಲ್ಲದೆ, ಊಟಕ್ಕೆ ಹಣವಿಲ್ಲ ಪರದಾಡಿದ್ದ ವಲಸೆ ಕಾರ್ಮಿಕರು ಪರದಾಡುತ್ತಿದ್ದು. ಕಾರ್ಮಿಕರ ನೆರವಿಗೆ ಅಕ್ಷಯಪಾತ್ರ ಫೌಂಡೇಶನ್ ಧಾವಿಸಿದೆ.