Thursday, April 25, 2024

ಟಾಟಾ ಮಾಜಿ ಅಧ್ಯಕ್ಷ ದುರ್ಮರಣ, ನಿಜವಾದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ

ಬೆಂಗಳೂರು: ಟಾಟಾ ಸಮೂಹದ ಮಾಜಿ ಅಧ್ಯಕ್ಷರು ದುರ್ಮರಣ ಹೊಂದುತ್ತಾರೆ, ಎಚ್ಚರಿಕೆಯಿಂದ ಇರಬೇಕು ಎಂದು ದಾವಣಗೆರೆ ಜಿಲ್ಲೆಯ ಹರಿಹರದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ನುಡಿದ ಭವಿಷ್ಯವಾಣಿ ಈಗ ನಿಜವಾಗಿದೆ.

ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಕಳೆದ ಅಗಸ್ಟ್​ 27 ರಂದು ತಮ್ಮ ಅಧಿಕೃತ ಫೇಸ್​ಬುಕ್​ ಪೇಜ್​ನಲ್ಲಿ ಬರೆದುಕೊಂಡ ಅವರು, ಟಾಟಾ ಸಮೂಹದ ಮಾಜಿ ಅಧ್ಯಕ್ಷರಿಗೆ ಒಂದು ತಿಂಗಳು ಕಂಟಕ ಇದೆ. ಇದರಲ್ಲಿ ಅವರು ದುರ್ಮರಣ ಹೊಂದುತ್ತಾರೆ. ಸಾವಿನ ನಂತರ ಟಾಟಾ ಸಮೂಹದ ವ್ಯವಹಾರದಲ್ಲೂ ತೊಡಕಾಗಲಿದೆ ಎಂದು ಸ್ವಾಮೀಜಿ ಹೇಳಿದ್ದರು.

ಸ್ವಾಮೀಜಿ ಅವರ ನುಡಿದಿದ್ದ ಭವಿಷ್ಯವಾಣಿಯಂತೆ, ನಿನ್ನೆ ಅಹಮದಾಬಾದ್​ನಿಂದ ಮುಂಬಯಿಗೆ ತೆರಳುತ್ತಿದ್ದ ವೇಳೆ ಟಾಟಾ ಸಮೂಹದ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಚಲಿಸುತ್ತಿದ್ದ ಕಾರು ಮುಂಬೈ ಸಮೀಪ ಪಾಲ್‌ಘರ್‌ನಲ್ಲಿ ಅವಘಾತದ ಸಂಭವಿಸಿ ಸಾವೀಗಿಡಾಗಿದ್ದರು.

RELATED ARTICLES

Related Articles

TRENDING ARTICLES