Friday, May 17, 2024

ಮುರುಘಾ ಶ್ರೀ ಜಾಮೀನು ಅರ್ಜಿ ಸೆಪ್ಟೆಂಬರ್​ 1 ರಂದು ಮುಂದೂಡಿಕೆ

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪ ಒತ್ತಿರುವ ಮುರಘಾ ಮಠದ ಶ್ರೀಗಳ ಜಾಮೀನು ಅರ್ಜಿಯನ್ನ ಸೆಪ್ಟೆಂಬರ್​ 1 ನೀರಿಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ.

ಮುರುಘಾ ಮಠದ ಶ್ರೀಗಳ ಪರ ವಕೀಲ ಕೆ.ಎಲ್​ ವಿಶ್ವನಾಥಯ್ಯ ಅವರು ಜಿಲ್ಲಾ ನ್ಯಾಯಾಲಯಕ್ಕೆ ನೀರಿಕ್ಷಾ ಜಾಮೀನು ಅರ್ಜಿಯನ್ನ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ವಿಚಾರಣೆ ಇಂದು ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಸೆಪ್ಟೆಂಬರ್​ 1 ರಂದು ನೀರಿಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಲಾಗಿದೆ.

ಅಲ್ಲದೇ, ಈ ಸಂಬಂಧ ನ್ಯಾಯಾಲಯದಿಂದ ಇಬ್ಬರು ಸಂತ್ರಸ್ತ ಯುವತಿಯರಿಗೆ ಜಿಲ್ಲಾ ನ್ಯಾಯಾಲಯ ನೋಟಿಸ್​ ನೀಡಿದೆ.

ಇನ್ನು ಮುರುಘಾಮಠಕ್ಕೆ ಒಳಪಟ್ಟಿರುವ ಮಲ್ಲಾಡಿಹಳ್ಳಿ ಆಶ್ರಮದಲ್ಲಿ ಮುರುಘಾಶ್ರೀ ಭಾವಚಿತ್ರ ಹೊರಗಿಟ್ಟು ಚಪ್ಪಲಿಯಿಟ್ಟು ಮುರುಘಾಶ್ರೀ ಭಾವಚಿತ್ರಕ್ಕೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES