Sunday, May 19, 2024

ರಾಹುಲ್​​ ದ್ರಾವಿಡ್​​​​​​​​ ಕೊರೊನಾದಿಂದ ಗುಣಮುಖ

ನವದೆಹಲಿ: ಇಂದು ನಡೆಯಲಿರುವ ಇಂಡಿಯಾ-ಪಾಕಿಸ್ಥಾನ ಮಹತ್ವದ ಏಷ್ಯಾ ಕಪ್​ ಟೂರ್ನಿ ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಕೊರೊನಾಗೆ ತುತ್ತಾಗಿದ್ದ ಇಂಡಿಯಾ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಇದೀಗ ಚೇತರಿಸಿಕೊಂಡಿದ್ದು ತಂಡ ಸೇರಿಕೊಂಡಿದ್ದಾರೆ.

ಏಷ್ಯಾ ಕಪ್​ ಆರಂಭಕ್ಕೂ ಮೊದಲು ಸೋಂಕಿಗೀಡಾಗಿದ್ದ ದ್ರಾವಿಡ್​ ಕೆಲ ದಿನಗಳಿಂದ ಕ್ವಾರಂಟೈನ್​ ಆಗಿದ್ದರು. ಈಗ ಅವರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್​ ಬಂದಿದೆ. ಹೀಗಾಗಿ ನಿನ್ನೆಯೇ ದುಬೈಗೆ ಹಾರಿ ತಂಡವನ್ನು ಸೇರಿಕೊಂಡಿದ್ದಾರೆ.

ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಅವರಿಗೆ ಕೊರೊನಾ ಕಾಣಿಸಿಕೊಂಡ ಹಿನ್ನಲೆಯಲ್ಲಿ ಜಿಂಬಾಬ್ವೆ ಸರಣಿಗೆ ಹಂಗಾಮಿ ಕೋಚ್​ ಆಗಿ ಕೆಲಸ ಮಾಡಿದ್ದ ಲಕ್ಷ್ಮಣ್​ ಅವರು ಏಷ್ಯಾ ಕಪ್​ಗಾಗಿ ದುಬೈಗೆ ತೆರಳಿದ್ದರು. ತಂಡದ ಅಭ್ಯಾಸದ ವೇಳೆ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ ಮುಖ್ಯಸ್ಥರಾಗಿರುವ ಲಕ್ಷ್ಮಣ್​ ಮುಂದೆ ನಿಂತು ಅಗತ್ಯ ಸಲಹೆ ನೀಡಿದ್ದರು. ಇದೀಗ ದ್ರಾವಿಡ್​ ಆಗಮಿಸಿದ್ದು VVS ಲಕ್ಷ್ಮಣ್​ ತವರಿಗೆ ಮರಳುವ ಸಾಧ್ಯತೆ ಇದೆ. ಭಾರತ ಮತ್ತು ಪಾಕಿಸ್ತಾನ ಪಂದ್ಯ ಇಂದು ಸಂಜೆ 7.30ಕ್ಕೆ ಆರಂಭವಾಗಲಿದೆ

RELATED ARTICLES

Related Articles

TRENDING ARTICLES