Tuesday, May 14, 2024

ಮೈಶುಗರ್ ಫ್ಯಾಕ್ಟರಿ ಕ್ರೆಡಿಟ್ ಅಕ್ಕಂಗೆ ಹೋಗಲಿ : ಸುರೇಶ್ ಗೌಡ

ಮಂಡ್ಯ : ಮೈಶುಗರ್ ಫ್ಯಾಕ್ಟರಿ ಕ್ರೆಡಿಟ್ ಅಕ್ಕಂಗೆ ಹೋಗಲಿ ಎಂದು ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಸುರೇಶ್ ಗೌಡ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫ್ಯಾಕ್ಟರಿ ಶುರುವಾಗಿ ಚೆನ್ನಾಗಿ ನಡೆದು ರೈತರಿಗೆ ಅನುಕೂಲವಾಗಲಿ. ಮೈಶುಗರ್ ಕಾರ್ಖಾನೆ ಕ್ರೆಡಿಟ್ ಪೂರ್ತಿ ಅವರಿಗೆ ಹೋಗಲಿ. ಪಾಪ ನಾವು ಏನು ಮಾತನಾಡೇ ಇಲ್ಲ, ನಮಗೆ ಏನು ಗೊತ್ತಿಲ್ಲ. ಕ್ರೆಡಿಟ್ ಎಲ್ಲವೂ ಅಕ್ಕಂಗೆ ಹೋಗಲಿ. ಅದೇನಾದ್ರು ಕ್ರೆಡಿಟ್ ಎಲ್ಲ ಅವರೆ ತೆಗೆದುಕೊಳ್ಳಿ. ನಮಗೆ ಯಾವುದೇ ಕ್ರೆಡಿಟ್ ಬೇಡ ಎಂದರು.

ಇನ್ನು, ಶುಗರ್ ಫ್ಯಾಕ್ಟರಿ ಕತೆ ಏನಾಗಿತ್ತು ಅಂತ ಗೊತ್ತಿದೆ. ಮಂಡ್ಯದಲ್ಲಿ ನಮ್ಮ ಉದ್ದೇಶ ಸರ್ಕಾರವೇ ನಡೆಸಬೇಕು ಅನ್ನೊ ಉದ್ದೇಶ ಅಷ್ಟೆ. ಅದು ಬಿಟ್ಟರೆ ನಮ್ಮ ವಾದ ಇನ್ನೇನು ಇರಲಿಲ್ಲ. ಸರ್ಕಾರ ಒಪ್ಪಿಕೊಂಡಿದೆ,ನಡೆಸುತ್ತಿದೆ ನಡೆಸಲಿ. 5 ಕೋಟಿ ಆಗಲಿ ಸರ್ಕಾರ ನಡೆಸಲಿ. ಮೈಶುಗರ್ ಹ್ಯಾಂಟಿಕ್, ಮಂಡ್ಯ ಜನರ ಭಾವನೆ ಇದೆ. ಕಾರ್ಖಾನೆಗೆ ಯಾವುದೇ ದಕ್ಕೆ ಬರದ ರೀತಿ ಯಾವುದೇ ಸರ್ಕಾರವಾಗಲಿ ನಡೆಸಲಿ. ಶುಗರ್ ಫ್ಯಾಕ್ಟರಿಗಿಂತ ಶುಗರ್ ಫ್ಯಾಕ್ಟರಿ ಆಸ್ತಿ ಮೇಲೆ ಬಹಳ ಜನರ ಕಣ್ಣಿದೆ. ಅದು ಆಗಬಾರದು, ಮೈಶುಗರ್ ಆಸ್ತಿ ಕಾಪಾಡಿಕೊಳ್ಳಬೇಕು ಎಂಧು ಹೇಳಿದರು.

ಅದಲ್ಲದೇ, ಸಕ್ಕರೆ ನಾಡು ಅಂತ ಬಂದಿದ್ದೆ ಫ್ಯಾಕ್ಟರಿಯಿಂದ. ಸರ್ಕಾರ ನಡೆಸಲಿ, ಒಳ್ಳೆಯ ಅಧಿಕಾರಿಯನ್ನ ಹಾಕಿ ನಡೆಸಲಿ. ನಾವು ಸಂಪೂರ್ಣವಾಗಿ ಸಪೋರ್ಟ್ ಕೊಡ್ತೇವೆ ಎಂದು ಮದ್ದೂರಿನಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ ಹೇಳಿದರು.

RELATED ARTICLES

Related Articles

TRENDING ARTICLES