Monday, May 20, 2024

ಯಾವುದೇ ಪಕ್ಷಗಳಲ್ಲೂ ಯಾವುದೇ ನೈತಿಕತೆ ಉಳಿದಿಲ್ಲ : ಹೆಚ್​ಡಿಕೆ

ರಾಮನಗರ : ಯಾವುದೇ ಪಕ್ಷದ ಮುಖಂಡರು ಹೇಳಿಕೆ ಕೊಟ್ರು ನಾನು ಮುಂದೆ ತಲೆಕೆಡಿಸಿಕೊಳ್ಳೊಲ್ಲ ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಗರಕಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಯಾವುದೇ ಪಕ್ಷದ ಮುಖಂಡರು ಹೇಳಿಕೆ ಕೊಟ್ರು, ನಾನು ಮುಂದೆ ತಲೆಕೆಡಿಸಿಕೊಳ್ಳೊಲ್ಲ. ಜನಗಳ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ. ಯಾವುದೇ ಪಕ್ಷಗಳಲ್ಲೂ ಯಾವುದೇ ನೈತಿಕತೆ ಉಳಿದಿಲ್ಲ ಎಂದು ಹೇಳಿದರು.

ಇನ್ನು, ಇಂತಹ ವಿಚಾರಗಳನ್ನು ಮಾತನಾಡೋದಕ್ಕೆ ಹೆಚ್ಚಿನ ವ್ಯಾಖ್ಯಾನ ಕೊಡುವ ಅರ್ಥವಿಲ್ಲ. ಯಾವುದೋ ಒಂದು ಸಿಚ್ಯುವೇಶನ್​​ನಲ್ಲಿ ಈ ವಿಚಾರ ಮಾತನಾಡಿದ್ದಾರೆ. ಬಿಜೆಪಿಯವರು ಈ ವಿಷಯವನ್ನು ಬೇರೆ ರೀತಿ ಡೈವರ್ಟ್ ಮಾಡುತ್ತಿದ್ದಾರೆ. ಮನಸ್ಸಿಗೆ ನೋವಾಗಿದ್ರೆ ನಾನು ಕ್ಷಮೆ ಕೇಳುತ್ತೇನೆ , ವಿಷಾದ ವ್ಯಕ್ತಪಡಿಸುತ್ತೇನೆ ಅಂತಾ ಹೇಳಿದ್ದಾರೆ. ಈ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡುವ ಅವಶ್ಯಕತೆ ಇಲ್ಲ ಅನ್ನೋದು ನನ್ನ ಅಭಿಪ್ರಾಯ ಎಂದರು.

RELATED ARTICLES

Related Articles

TRENDING ARTICLES