Sunday, May 19, 2024

ಕರುನಾಡ ಸೈನಿಕರಿಗೆ ರಾಖಿ ಕಳುಹಿಸುವ ಸಹೋದರಿ..!

ಬಳ್ಳಾರಿ : ಕಳೆದ ಮೂರು ವರ್ಷಗಳಿಂದ ಭಾರತೀಯ ಯೋಧರಿಗೆ ರಾಖಿ ತಲುಪಿಸುತ್ತಿರುವ ಈ ಸಹೋದರಿ ಬಳ್ಳಾರಿಯ ಬಸವೇಶ್ವರನಗರ ನಿವಾಸಿ ವಿದ್ಯಾಶ್ರೀ.ಬಿ. ಪ್ರತಿ ವರ್ಷ 1,000 ರಾಖಿಗಳನ್ನು ಕಳುಹಿಸಿ ವಿದ್ಯಾಶ್ರೀರವರು ರಕ್ಷಾಬಂಧನ ಹಬ್ಬ ಸಾರವಾಗಿರುವ ಸಹೋದರತ್ವವನ್ನು ಮೆರೆದಿದ್ದಾರೆ. ರಾಖಿ ತಲುಪಿದ ನಂತರ ಸೈನಿಕರು ಅದನ್ನು ಧರಿಸಿ ವಿದ್ಯಾಶ್ರೀಯವರೊಂದಿಗೆ ಮಾತನಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ವಿದ್ಯಾಶ್ರೀ ಕಳಿಸಿರುವ ರಾಖಿಯನ್ನು ಯೋಧರು ಸಹೋದರಿಯನ್ನು ನೆನಪಿಸಿಕೊಂಡು ಪರಸ್ಪರ ಕಟ್ಟಿಕೊಂಡಿದ್ದಾರೆ. ನಂತರ ವಿದ್ಯಾಶ್ರೀ ಅವರಿಗೆ ರಾಖಿ ಕಟ್ಟುವ ಫೋಟೋ ಕಳಿಸಿ ರಕ್ಷಾ ಬಂಧನ ಆಚರಿಸಿಕೊಳ್ಳುತ್ತಾರೆ. ಸೈನಿಕರಿಗೆ ರಾಖಿ ಕಳುಹಿಸುವ ಮೂಲಕ ರಕ್ಷಾಬಂಧನವನ್ನು ವೈಶಿಷ್ಠ್ಯಪೂರ್ಣವಾಗಿ ಆಚರಿಸುತ್ತಿರುವ ವಿದ್ಯಾಶ್ರೀಯವರ ಕಾರ್ಯವನ್ನು ಅವರ ಕುಟುಂಬ ವರ್ಗ ಹಾಗೂ ಸ್ನೇಹಿತರು ಶ್ಲಾಘಿಸಿದ್ದಾರೆ.

ದೇಶದ ರಕ್ಷಣೆಗಾಗಿ ಕುಟುಂಬದಿಂದ ದೂರ ಇರುವ ಯೋಧರಿಗೆ ರಾಖಿ ಕಳುಹಿಸುವ ಮೂಲಕ ವಿಶಿಷ್ಠವಾಗಿ ರಕ್ಷಾಬಂಧನ ಹಬ್ಬ ಆಚರಿಸುವ ವಿದ್ಯಾಶ್ರೀ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಬಸವರಾಜ ಹರನಹಳ್ಳಿ, ಪವರ್ ಟಿವಿ, ಬಳ್ಳಾರಿ

RELATED ARTICLES

Related Articles

TRENDING ARTICLES