Tuesday, May 21, 2024

ಬೋಪಣ್ಣನ ವೇದಿಕೆಯಲ್ಲಿ ಕಿಚ್ಚ, ಜಗ್ಗು, ಶರಣ್, ಡಾಲಿ

ಸ್ಯಾಂಡಲ್​ವುಡ್​ನ ಟ್ರೆಂಡ್ ಸೆಟ್ಟರ್ ರವಿಮಾಮ, ಬೋಪಣ್ಣನ ಅವತಾರ ತಾಳಿದ್ದಾರೆ. ಆದ್ರೆ ಅಲ್ಲಿ ರೊಮ್ಯಾನ್ಸ್​ಗೆ ಕಿಂಚಿತ್ತೂ ಕೊರತೆ ಇಲ್ಲ. ಟಿಪಿಕಲ್ ಕ್ರೇಜಿಸ್ಟಾರ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಎಲ್ಲರ ಕಣ್ಣು ಕುಕ್ಕುವಂತಿತ್ತು. ಕ್ರೇಜಿ ಕ್ಯಾಪ್ಟನ್​ಗೆ ನವರಸನಾಯಕ ಜಗ್ಗೇಶ್, ಕಿಚ್ಚ ಸುದೀಪ್, ಡಾಲಿ, ಅಧ್ಯಕ್ಷ ಶರಣ್ ಸೇರಿದಂತೆ ಇಡೀ ಇಂಡಸ್ಟ್ರಿ ಸಾಥ್ ನೀಡಿತು. ಆ ಅವಿಸ್ಮರಣೀಯ ಕ್ಷಣಗಳ ಕಂಪ್ಲೀಟ್ ವರದಿ ನೀವೇ ಓದಿ.

  • ಸಿಕ್ಕಾಪಟ್ಟೆ ಸಸ್ಪೆನ್ಸ್.. ಮಸ್ತ್ ರೊಮ್ಯಾನ್ಸ್.. ಹೈಕ್ಳು ಖುಷ್
  • ಕಿಚ್ಚನ​ ವಾಯ್ಸ್​​ನಲ್ಲಿ ಕರೆಂಟ್​​​ ಇದೆ ಎಂದ ರವಿಮಾಮ
  • ಆ ಟೈಪ್​.. ಈ ಟೈಪ್​.. ಎಲ್ಲಾ ಟೈಪ್​ ಇದೆ- ಜಗ್ಗೇಶ್..!

ಕ್ರೇಜಿಸ್ಟಾರ್​​ ಆ್ಯಕ್ಷನ್​ ಕಟ್​ ಹೇಳಿದ ಸಿನಿಮಾಗಳಲ್ಲಿ ಸಾವಿರ ಸೂಕ್ಷ್ಮ ವಿಷಯಗಳ ಸಮಾಗಮವಿರುತ್ತೆ. ಪ್ರಯೋಗಾತ್ಮಕ ಸಿನಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲೇ ಕ್ರಿಯೇಟಿವಿಟಿಗೆ ಹೆಸರಾದ ಜನಪ್ರಿಯ ನಿರ್ದೇಶಕ ರವಿಚಂದ್ರನ್​. ಇದೀಗ ಆಗಸ್ಟ್ 12ಕ್ಕೆ ಕ್ರೇಜಿಸ್ಟಾರ್​​ ನಿರ್ದೇಶನದ ರವಿ ಬೋಪಣ್ಣ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ. ಹಾಗಾಗಿ ಸ್ಯಾಂಡಲ್​ವುಡ್​ ತಾರೆಯರ ಸಮಾಗಮದಲ್ಲಿ ಭರ್ಜರಿ ಪ್ರೀ-ರಿಲೀಸ್​ ಇವೆಂಟ್​ ಸಮಾರಂಭ ನಡೆಯಿತು. ಒಂದೇ ವೇದಿಕೆಯಲ್ಲಿ ಕಿಚ್ಚ ಸುದೀಪ್, ಡಾಲಿ, ಜಗ್ಗೇಶ್​​​, ಶರಣ್​​ ರಂಗೇರಿಸಿದ್ರು.

ಈಗಾಗ್ಲೇ ರವಿಬೋಪಣ್ಣ ಚಿತ್ರದ ಝಲಕ್​ಗಳು ಸಿಕ್ಕಾಪಟ್ಟೆ ಹೈಪ್​ ಕ್ರಿಯೇಟ್​ ಮಾಡಿವೆ. ಕಾವ್ಯ ಶೆಟ್ಟಿ ವೈಯ್ಯಾರಕ್ಕೆ ಪಡ್ಡೆ ಹೈಕಳು ಕ್ಲೀನ್​ ಬೋಲ್ಡ್​ ಆಗಿದ್ದಾರೆ. ರೊಮ್ಯಾಂಟಿಕ್​ ಹಾಡುಗಳು ಯುವಕರ ಎದೆಯಲ್ಲಿ ಕಿಚ್ಚು ಹೆಚ್ಚಿವೆ. ರವಿಮಾಮನಿಗೆ ಕಿಚ್ಚ ಕೂಡ ಸಾಥ್​ ನೀಡಿದ್ದು, ಚಿತ್ರದಲ್ಲಿ ಕಾಣಸಿಗಲಿದ್ದಾರೆ. ಜೈ ಜಗದೀಶ್​​, ರಚಿತಾ ರಾಮ್​, ರಮ್ಯಾಕೃಷ್ಣ​​​, ರವಿಶಂಕರ್​ ಸೇರಿದಂತೆ ಘಟಾನುಘಟಿ ಕಲಾವಿದರ ಸಮಾಗಮವಿದೆ.

ಸುದೀಪ್​ರನ್ನ ಸದಾ ತನ್ನ ಹಿರಿಮಗನಂತೆ ಕಾಣೋ ರವಿಮಾಮ, ವೇದಿಕೆಯಲ್ಲಿ ಕಿಚ್ಚನ ಗುಣಗಾನ ಮಾಡಿ, ನಮ್ಮ ನಡುವೆ ಜನ್ಮ ಜನ್ಮದ ಅನುಬಂಧವಿದೆ ಎಂದ್ರು. ಸುದೀಪ್​ ವಾಯ್ಸ್​​ನಲ್ಲಿ ಕರೆಂಟ್ ಇದೆ ಅಂತ ಅವ್ರ ಬೇಸ್ ವಾಯ್ಸ್​ನ ಹೊಗಳಿದ್ರು.

ರೋಣ ವೇದಿಕೆ ಹತ್ತಿ ಬರ್ತಾ ಇದ್ದಂತೆ ಶಿಳ್ಳೆ, ಚಪ್ಪಾಳೆಯ ಸುರಿಮಳೆಯಾಯ್ತು. ಪ್ಯಾನ್​​ ಇಂಡಿಯಾ ಕಾನ್ಸೆಪ್ಟ್​​​ನ ಕ್ರೇಜಿಸ್ಟಾರ್​ ಆಗಲೇ ತಂದಿದ್ದಾರೆ. ಕನ್ನಡ ಚಿತ್ರರಂಗದ ಆಸ್ತಿ, ಗತ್ತು, ವೈಭವ ನಮ್ ರವಿ ಸರ್​ ಎಂದು ಅಣ್ಣಯ್ಯನನ್ನು ಗುಣಗಾನ ಮಾಡಿದ್ರು.

ರವಿ ಬೋಪಣ್ಣ ಸಿನಿಮಾದಲ್ಲಿ ಗ್ಲಾಮರಸ್​ ಸೀನ್​ಗಳು ಹೆಚ್ಚಾಗಿ ಇರೋದಕ್ಕೆ ಜಗ್ಗೇಶ್​ ನಗೆ ಚಟಾಕಿ ಹಾರಿಸಿದ್ರು. ಈ ಚಿತ್ರದಲ್ಲಿ ಆ ಟೈಪ್​, ಈ ಟೈಪ್​, ಎಲ್ಲಾ ಟೈಪ್​ ಇದೆ. ರವಿಚಂದ್ರನ್​ ಯಾವ ಟೈಪ್​​ ಗೊತ್ತಾಗ್ಬೇಕು ಎಂದ್ರು.

  • ರವಿ ಸರ್ ಫಿಲಾಸಫರ್.. ಹೆಡ್​ಬುಷ್​ನಲ್ಲಿ ಕ್ರೇಜಿ ಫಿಲಾಸಫಿ
  • ಅಹಂ ಪ್ರೇಮಾಸ್ಮಿ ಆಡಿಷನ್ ನೆನೆದ ಸ್ಯಾಂಡಲ್​ವುಡ್ ಶರಣ

ಡಾಲಿ ಧನಂಜಯ ಕೂಡ ಮಾತನಾಡಿ, ರವಿಚಂದ್ರನ್​ ಸರ್​ಗಿಂತ ಫಿಲಾಸಫರ್​ ಬೇಕಾ ಎಂದು ಗುಣಗಾನ ಮಾಡಿದ್ರು. ಅಲ್ಲದೆ, ಹೆಡ್​​ಬುಷ್​​​ ಕಥೆಯಲ್ಲಿ ರವಿ ಸರ್​ ಫಿಲಾಸಫಿ ಇದೆ ಎಂದ್ರು.

ಇದ್ರ ಜತೆಗೆ ಸ್ಯಾಂಡಲ್​ವುಡ್ ಅಧ್ಯಕ್ಷ ಶರಣ್​ ಕೂಡ ತಮ್ಮ ಅಹಂ ಪ್ರೇಮಾಸ್ಮಿ ಚಿತ್ರದ ಆಡಿಷನ್​ ಸಂದರ್ಭವನ್ನು ನೆನಪು ಮಾಡಿಕೊಂಡ್ರು. ಆ ಸಮಯದಲ್ಲಿ ರವಿ ಸರ್​ ನನಗೆ ಅವಕಾಶ ಕೊಟ್ಟ ಗಳಿಗೆ ಮರೆಯೋಕೆ ಸಾಧ್ಯವೇ ಇಲ್ಲ ಅಂತ ಕನಸುಗಾರನ ಸಹಾಯ ನೆನೆದ್ರು.

ಸಿನಿಮಾ ಈಗಾಗ್ಲೇ ಸಿಕ್ಕಾಪಟ್ಟೆ ಕ್ರೇಜ್​​ ಹುಟ್ಟಿಸಿದೆ. ಬಹಳ ದಿನಗಳ ನಂತ್ರ ರವಿ ಬೋಪಣ್ಣ ಚಿತ್ರವನ್ನು ತಾವೇ ನಿರ್ದೇಶಿಸಿ, ನಿರ್ಮಿಸಿರೋ ಕ್ರೇಜಿಸ್ಟಾರ್​ಗೆ, ಅವ್ರ ಅಭಿಮಾನಿಗಳು, ಸಿನಿಪ್ರಿಯರಂತೆ ಅವ್ರಿಗೂ ಭರವಸೆ ನೂರು ಪಟ್ಟು ಜಾಸ್ತಿನೇ ಇದೆ. ಒಟ್ಟಾರೆ ರವಿ ಬೋಪಣ್ಣನ ಸಸ್ಪೆನ್ಸ್ ದರ್ಬಾರ್ ಜೊತೆ ರೊಮ್ಯಾನ್ಸ್ ಯಾವ ಲೆವೆಲ್​ಗಿರಲಿದೆ ಅಂತ ಇದೇ ವಾರ ಕಾದು ನೋಡಬೇಕಿದೆ.

ರಾಕೇಶ್​​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES