Saturday, September 21, 2024

ವಿದ್ಯುತ್ ತಂತಿ ತಗುಲಿ ಬಾಲಕ ಸಾವು

ಬೆಂಗಳೂರು : ವಿದ್ಯುತ್ ತಂತಿ ತಗುಲಿ ಬಾಲಕ ಸಾವನ್ನಪ್ಪಿದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಬಿಬಿಎಂಪಿ ವಿರುದ್ಧ ಬಾಲಕ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದ್ದು, Bescom ನಿರ್ಲಕ್ಷ್ಯದಿಂದನೇ ಘಟನೆ ನಡೆದಿದೆ. ಬಿಲ್ 100 ರೂಪಾಯಿ ಬಾಕಿ ಇದ್ರೂ ಬಿಡಲ್ಲ. ಆದರೆ ಈ ಘಟನೆ ನಡೆದು ಒಂದು ದಿನವಾದ್ರೂ ಯಾವ ಅಧಿಕಾರಿಯೂ ಬಂದಿಲ್ಲ.

ಕೇರಳದ ಮದರಸದಲ್ಲಿ ವ್ಯಾಸಂಗ ಮಾಡ್ತಿದ್ದ. ರಜೆ ನಿಮಿತ್ತ ತಾಯಿ ಮನೆಗೆ ಬಂದಿದ್ದ ಲುಕ್ಮಾನ್ ಇಂದು ಮತ್ತೆ ಕೇರಳದ ಮದ್ರಾಸಗೆ ತೆರಳಬೇಕಿದ್ದ ಆದರೆ, ನಿನ್ನೆ ಸಂಜೆ ಸ್ನೇಹಿತರ ಜೊತೆಗೆ ಆಟವಾಡಿಕೊಂಡಿದ್ದ ಈತ ನಮಾಜ್ ಗೆ ತಡವಾಯಿತೆಂದು ಸ್ನೇಹಿತರ ಬಿಟ್ಟು ಓಡಿ ಬಂದ ಈ ವೇಳೆ ಬಾಲಕನ ಮೇಲೆ ಹರಿದು ಬಿದ್ದ ವಿದ್ಯುತ್ ತಂತಿ ತಗುಲಿದ್ದು, ಘಟನೆ ವಿರುದ್ಧ ಸ್ಥಳೀಯರ ,ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES