Sunday, May 19, 2024

ಹೈವೆಯಲ್ಲಿ ಹೊತ್ತಿ ಉರಿದ KIA ಕಾರು

ಹಾವೇರಿ : ಗದಗದಿಂದ ಹಾವೇರಿ ಕಡೆಗೆ ಹೊರಟಿದ್ದ ಕಿಯಾ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಹೊತ್ತಿ ಉರಿದ ಘಟನೆ ಗುರುವಾರ ಸಂಜೆ ತಾಲ್ಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ- 4ರಲ್ಲಿ ನಡೆದಿದೆ.

ಗದಗ ನಗರದ ನಿವಾಸಿ ವಿಕ್ರಂ ಬಾಪನಾ ಹಿರಾಚಂದ್‌ ಅವರಿಗೆ ಸೇರಿದ ಕಾರು ಎಂದು ತಿಳಿದು ಬಂದಿದೆ. ಇವರ ಜತೆಗೆ ಪ್ರಯಾಣ ಮಾಡುತ್ತಿದ್ದ ಸ್ನೇಹಿತರಾದ ವಿವೇಕಾನಂದ ಬಡಾವಣೆ ನಿವಾಸಿ ಸಂತೋಷ ಶಿವಪ್ಪ ಕುರಿ ಮತ್ತು ಅಸ್ಲಾಂ ಅಬ್ದುಲ್‌ ರೆಹಮಾನ್‌ಸಾಬ್‌ ಮಾಲದಾರ ಈ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು, ಏಕಾಏಕಿ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಎಚ್ಚೆತ್ತುಕೊಂಡು ತಕ್ಷಣ ರಸ್ತೆ ಬದಿಗೆ ಕಾರು ನಿಲ್ಲಿಸಿ, ಮೂವರು ಪ್ರಯಾಣಿಕರು ಕೆಳಗಿಳಿಯುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಉರಿಯಲು ಪ್ರಾರಂಭಿಸಿದೆ. ಕಾರು ಖರೀದಿಸಿ 2 ತಿಂಗಳಾಗಿತ್ತು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ವೇಳೆಗೆ ಕಾರು ಸುಟ್ಟು ಕರಕಲಾಗಿತ್ತು. ಈ ಘಟನೆ ಸವಣೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಿಎಸ್‌ಐಗಳಾದ ಮೇಘರಾಜ ದೊಡ್ಡಮನಿ ಮತ್ತು ಎಸ್‌.ಡಿ.ಸಾಗರ್‌ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

RELATED ARTICLES

Related Articles

TRENDING ARTICLES