Sunday, May 12, 2024

ಅವತಾರ್​​ ಫೀಲ್​ನಲ್ಲಿ ರೋಣನ ಫ್ಯಾಂಟಮ್ ವರ್ಲ್ಡ್​ ಸೃಷ್ಠಿ

ರೋಣನ್ ಪ್ರಪಂಚ ಪ್ರೇಕ್ಷಕರಿಗಾಗಿ ಓಪನ್ ಆಗೋಕೆ ಇನ್ನು ಜಸ್ಟ್ ಎರಡು ವಾರಗಳಷ್ಟೇ ಬಾಕಿಯಿದೆ. ಕೆಜಿಎಫ್ ಆರ್ಟ್​ ಡೈರೆಕ್ಟರ್ ಕಲಾಕುಂಚದಲ್ಲಿ ಅವತಾರ್​ನ ಮೀರಿಸೋ ಅಂತಹ ವನಸಿರಿ ತಲೆ ಎತ್ತಿದೆ. ಇಷ್ಟಕ್ಕೂ ಎಷ್ಟು ಸೆಟ್​ಗಳಿವೆ..? ರೋಣನಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರೋ ಆರ್ಟ್​ ವರ್ಕ್​ ಯಾವ ರೇಂಜ್​ಗೆ ಇರಲಿದೆ ಅನ್ನೋದ್ರ ಪವರ್​ಫುಲ್ ಎಕ್ಸ್​ಕ್ಲೂಸಿವ್ ನಿಮ್ಮ ಮುಂದೆ.

ವತಾರ್​​ ಫೀಲ್​ನಲ್ಲಿ ರೋಣನ ಫ್ಯಾಂಟಮ್ ವರ್ಲ್ಡ್​ ಸೃಷ್ಠಿ

ಕೆಜಿಎಫ್ ಆರ್ಟ್​ ಡೈರೆಕ್ಟರ್​ನಿಂದ ನೈಜ ವನಸಿರಿ ಅನಾವರಣ

3 ಫ್ಲೋರ್​ಗಳಲ್ಲಿ 15 ಸೆಟ್​.. 2 ಅಡಿ ಗಿಡ 4 ಅಡಿ ಬೆಳವಣಿಗೆ

ಟೆಂಪಲ್, ಪೊಲೀಸ್ ಸ್ಟೇಷನ್ ಹಾಗೂ ಗೋಡೌನ್ ಸೆಟ್ಸ್..!

ವಿಕ್ರಾಂತ್ ರೋಣ ಈ ವರ್ಷದ ಮೋಸ್ಟ್ ಎಕ್ಸ್​ಪೆಕ್ಟೆಡ್ ಇಂಡಿಯನ್ ಮೂವೀಸ್​ನಲ್ಲಿ ಟಾಪ್​ಲಿಸ್ಟ್​ನಲ್ಲಿರೋ ಸಿನಿಮಾ. ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್, ಬಾಲಿವುಡ್ ಗ್ಲಾಮರ್ ಡಾಲ್ ಜಾಕ್ವೆಲಿನ್ ಫರ್ನಾಂಡಿಸ್ ಸಿನಿಮಾಗೆ ಒಂದು ತೂಕವಾದ್ರೆ, ಅಜನೀಶ್ ಮ್ಯೂಸಿಕ್ ಹಾಗೂ ಅನೂಪ್ ಡೈರೆಕ್ಷನ್ ಮತ್ತೊಂದು ತೂಕ.

ಈಗಾಗ್ಲೇ ರಿಲೀಸ್ ಆಗಿರೋ ಟೀಸರ್​ಗಳು, ಟ್ರೈಲರ್ ಹಾಗೂ ಸಾಂಗ್ಸ್ ಮಾಡ್ತಿರೋ ಹಂಗಾಮದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅವುಗಳ ಮೇಕಿಂಗ್ ಕ್ವಾಲಿಟಿ, ಅವತಾರ್ ಸಿನಿಮಾನ ಫೀಲ್ ಕೊಡ್ತಿವೆ. ಅಷ್ಟರ ಮಟ್ಟಿಗೆ ಹೊಸ ಪ್ರಪಂಚಕ್ಕೆ ನಿಮ್ಮನ್ನ ಕರೆದೊಯ್ಯಲಿವೆ. ಆದ್ರೆ ಅವತಾರ್ ಹಂಡ್ರೆಡ್ ಪರ್ಸೆಂಟ್ ಫ್ಯಾಂಟಸಿ ಮೂವಿ. ಇದು ಫ್ಯಾಂಟಮ್ ವರ್ಲ್ಡ್​ ನಲ್ಲಿರೋ ಌಕ್ಷನ್ ಅಡ್ವೆಂಚರ್ ಪರಪಂಚ.

ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಶಿವಕುಮಾರ್ ಅವ್ರ ಆರ್ಟ್​ ವರ್ಕ್​. ಇಡೀ ಸಿನಿಮಾ ಬೃಹತ್ ಸೆಟ್​ಗಳಲ್ಲೇ ಸೆರೆಹಿಡಿಯಲ್ಪಟ್ಟಿದ್ದು, ವಿಕ್ರಾಂತ್ ರೋಣನಿಗಾಗಿ ಒಂದು ಹೊಸ ಪ್ರಪಂಚವನ್ನೇ ಸೃಷ್ಠಿ ಮಾಡಿದ್ದಾರೆ ಕೆಜಿಎಫ್ ಖ್ಯಾತಿಯ ಆರ್ಟ್​ ಡೈರೆಕ್ಟರ್ ಶಿವಕುಮಾರ್. ಹೌದು.. ಹೈದ್ರಾಬಾದ್​ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸುಮಾರು ಮೂರು ಫ್ಲೋರ್​ಗಳಲ್ಲಿ ಹದಿನೈದು ಸೆಟ್​ಗಳು ತಯಾರಾಗಿದ್ವು.

ಮೂರ್ನಾಲ್ಕು ಸಣ್ಣ ಸೆಟ್​ಗಳು ಅನ್ನೋದು ಬಿಟ್ರೆ, ಹತ್ತರಿಂದ ಹನ್ನೆರಡು ಸೆಟ್​ಗಳು ನಿರೀಕ್ಷೆಗೂ ಮೀರಿದಷ್ಟು ಬೃಹತ್ ಆಗಿ ನಿರ್ಮಿತವಾಗಿದ್ದವು. ದಟ್ಟವಾದ ಅರಣ್ಯ, ಪೊಲೀಸ್ ಸ್ಟೇಷನ್, ದೊಡ್ಡದೊಂದು ಗೋಡೌನ್, ಟೆಂಪಲ್ ಇವೇ ವಿಕ್ರಾಂತ್ ರೋಣ ಮೇಜರ್ ಸೆಟ್​ಗಳು. ಅದ್ರಲ್ಲೂ ಕೊರೋನಾ ಲಾಕ್​ಡೌನ್ ವೇಳೆ ಸಿನಿಮಾದ ಸೆಟ್ ವರ್ಕ್​ ಹಾಗೂ ಶೂಟಿಂಗ್ ಸಖತ್ ಚಾಲೆಂಜಿಂಗ್ ಆಗಿತ್ತಂತೆ.

ಚೀನಾದಿಂದ ಆರ್ಟ್​ ವಿಶ್ಯುವಲ್ ಪ್ಲಾಂಟ್ಸ್​ನ ತರಿಸೋ ಪ್ಲಾನ್​ನಲ್ಲಿದ್ದ ಶಿವಕುಮಾರ್​ಗೆ ಕೊರೋನಾದಿಂದ ಎಲ್ಲವೂ ಉಲ್ಟಾ ಪಲ್ಟಾ ಆಯ್ತು. ಮೂರೂವರೆ ತಿಂಗಳ ಆ ಬೃಹತ್ ಸೆಟ್​ಗಳ ನಿರ್ಮಾಣ ಕಾರ್ಯದಲ್ಲಿ ಕೊರೋನಾದಿಂದ ರಿಯಲ್ ಪ್ಲಾಂಟ್ಸ್​ನ ಬಳಸುವಂತಾಯ್ತು. ಆದ್ರೆ ಒಂದು ತಿಂಗಳ ಗ್ಯಾಪ್​ನಲ್ಲಿ ಎರಡು ಅಡಿ ಇದ್ದ ಗಿಡಗಳು ನಾಲ್ಕು ಅಡಿ ಅಷ್ಟು ಬೆಳೆದು ನಿಂತವು. ಆಗ ಮತ್ತೆ ಕ್ಯಾಮೆರಾಗೆ ಬೇಕಾಗುವಷ್ಟು ಸ್ಪೇಸ್​​ನ ಕ್ರಿಯೇಟ್ ಮಾಡೋಕೆ ಶಿವಕುಮಾರ್ ಅಂಡ್ ಟೀಂ ಹರಸಾಹಸ ಮಾಡಿದ್ದಾರೆ.

ನಿರ್ಮಾಪಕ ಜಾಕ್ ಮಂಜು ಈ ಸಿನಿಮಾನ ಕೋವಿಡ್ ಟೈಮಲ್ಲಿ ನಿರ್ಮಾಣ ಮಾಡೋಕೆ ತೆಗೆದುಕೊಂಡ ನಿರ್ಧಾರ ನಿಜಕ್ಕೂ ಗ್ರೇಟ್. ಬಯೋ ಬಬಲ್ ಕ್ರಿಯೇಟ್ ಮಾಡಿ, ಕ್ರಿಕೆಟರ್ಸ್​ನ ಕಾಪಾಡಿಕೊಳ್ಳುವಂತೆ ಇಡೀ ಫಿಲ್ಮ್ ಮೇಕಿಂಗ್ ತಂಡವನ್ನು ಕಾಪಾಡಿಕೊಂಡ್ರು. ಇದು ನಿಜಕ್ಕೂ ಅವ್ರಿಗಿರೋ ಸಿನಿಮಾ ಬದ್ಧತೆ ಹಾಗೂ ಪ್ಯಾಷನ್​ನ ಕೈಗನ್ನಡಿಯಾಗಿದೆ. ಒಟ್ಟಾರೆ ಸಿನಿಮಾ ಇದೇ ಜುಲೈ 28ಕ್ಕೆ ವರ್ಲ್ಡ್​ ವೈಡ್ ಆರಕ್ಕೂ ಅಧಿಕ ಭಾಷೆಗಳಲ್ಲಿ ತೆರೆಗಪ್ಪಳಿಸುತ್ತಿದ್ದು, ಸಖತ್ ಕಿಕ್ ಕೊಡಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES