Friday, September 20, 2024

ಮುತಾಲಿಕ್​​​ಗೆ ಕೊಲೆ ಬೆದರಿಕೆ : ದೂರು ದಾಖಲು

ಧಾರವಾಡ: ಮೈಕ್, ಹಿಜಾಬ್ ಹಾಗೂ ಮಸೀದಿ ವಿಚಾರವಾಗಿ ಧ್ವನಿ ಎತ್ತಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಇನ್ಸ್ಟಾಗ್ರಾಮ್‌ನಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ. ಈ ವಿಚಾರವಾಗಿ ಮುತಾಲಿಕ್ ಅವರು ಈಗ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಉಡುಪಿಯ ಇನ್ಸ್ಟಾಗ್ರಾಮ್ ನ ಮಾರಿಗುಡಿ ಎಂಬ ಪೇಜ್‍ನಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಜೀವ ಬೆದರಿಕೆ ಹಾಕಲಾಗಿತ್ತು. ಅಲ್ಲದೇ ಅವರ ತಲೆ ಕಡಿದ್ರೆ 10 ಲಕ್ಷ ಬಹುಮಾನ ಕೊಡುವ ಮಾತನ್ನ ಉಲ್ಲೇಖ ಮಾಡಿದ್ದರು. ಈ ಪೇಜನ್ನ 60 ಜನ ಲೈಕ್ ಕೂಡಾ ಮಾಡಿದ್ರೆ, ಹಲವರು ಕಮೇಂಟ್ ಕೂಡಾ ಮಾಡಿದ್ರು. ಈ ವಿಚಾರವಾಗಿ ಪ್ರಮೋದ್ ಮುತಾಲಿಕ್ ಅವರು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲು ಏರಿದ್ದಾರೆ. ಧಮ್ಕಿ ವಿಚಾರವಾಗಿ ಪೊಲೀಸ್ ಆಯುಕ್ತ ಲಾಬುರಾಮ್ ಜೊತೆ ಚರ್ಚೆ ನಡೆಸಿರುವ ಮುತಾಲಿಕ್, ಆರೋಪಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಲ್ಲದೇ ಮೂರು ನಂಬರ್​​ಗಳಿಂದ ಕೊಲೆ ಬೆದರಿಕೆ ಕರೆಗಳು ಕೂಡಾ ಬರುತ್ತಿವೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿರುವ ಮುತಾಲಿಕ್, ಈ ಬೆದರಿಕೆಗೆ ಹೆದರಿ ಯಾವುದೇ ಹೋರಾಟದಿಂದ ಹಿಂದೆ ಸರಿಯಲ್ಲ.ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೊಡ್ತೇವೆ ಎಂದಿದ್ದಾರೆ.

ಇನ್ನು ಮುತಾಲಿಕ್ ಅವರ ಮನವಿ ಸ್ವೀಕರಿಸಿರುವ ಪೊಲೀಸ್ ಆಯುಕ್ತ ಲಾಬುರಾಮ್, ಈ ಮೆಸೇಜ್ ಹಾಕಿದವರ ಹೆಡೆಮುರಿ ಕಟ್ಟಲು ಸಜ್ಜಾಗಿದ್ದಾರೆ.

ಸದ್ಯ ಪೊಲೀಸ್ ಇಲಾಖೆ ಮುತಾಲಿಕ್ ಅವರ ದೂರಿನ ಮೇರೆಗೆ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES