Monday, May 20, 2024

ಭೀಕರ ರಸ್ತೆ ಅಪಘಾತ : ಸ್ಥಳದಲ್ಲೇ ಓರ್ವ ಯುವಕ ಮೃತ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭೀಕರ ರಸ್ತೆ ಅಪಘಾತವಾಗಿ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಿಜಯನಗರದ ಪ್ರಶಾಂತನಗರದಲ್ಲಿ ನಡೆದಿದೆ.

ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಓರ್ವ ಯುವಕ ಸ್ಥಳದಲೇ ಸಾವನ್ನಪ್ಪಿದ್ದು,ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಕಾವೇರಿ ಪುರ ವಾರ್ಡ್ ನಿವಾಸಿ ಮಿಥುನ್ ಮೃತ ಬೈಕ್ ಸವಾರ ಎದುರಿನಿಂದ ಬರ್ತಿದ್ದ ಕಿರಣ್ ಎಂಬ ಯುವಕ ಮತ್ತೊಬ್ಬ ಅಪ್ರಾಪ್ತ ಹುಡುಗನನ್ನ ಕೂರಿಸಿಕೊಂಡು ಬರ್ತಿದ್ದ ಮಿಥುನ್ ಈ ವೇಳೆ ಎದುರಿನಿಂದ ಬರ್ತಿದ್ದ ಬೈಕ್ ಗೆ ಡಿಕ್ಕಿಯಾಗಿದೆ.

ಇನ್ನು, ಗಾಯಾಳು ಅಪ್ರಾಪ್ತ ಬಾಲಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಮೇ.30 ರ ಮಧ್ಯಾಹ್ನ 12.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಜಯನಗರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES