Friday, March 29, 2024

ರಾಕೇಶ್ ಟಿಕಾಯತ್ ಮೇಲೆ ಹಲ್ಲೆ : ಮೂವರು ರಕ್ಷಣಾ ವೇದಿಕೆ ಸದಸ್ಯರು ವಶ

ಬೆಂಗಳೂರು: ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಕಪ್ಪು ಮಸಿ‌ ಬಳಿದು ಹಲ್ಲೆ ಮಾಡಿದ ಮೂವರು ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸಿ, ಮಾಹಿತಿ ನೀಡಿದ್ದಾರೆ. ಮಸಿ ಬಳಿದವರು ಭಾರತ ರಕ್ಷಣಾ ವೇದಿಕೆ ಸದಸ್ಯರು ಎನ್ನಲಾಗಿದೆ. ಭರತ್ ಶೆಟ್ಟಿ, ದಿಲೀಪ್ ಹಾಗೂ ಶಿವಕುಮಾರ್​​ರವರಾಗಿದ್ದಾರೆ. ಅಲ್ಲದೇ ಸಭೆಯಲ್ಲಿದ್ದ ರೈತ ಮುಖಂಡರು ನೀಡುವ ದೂರು ಆಧರಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ‌ತಿಳಿಸಿದರು.

ಇನ್ನು ಈ ಘಟನೆಯಿಂದ ಗದ್ದಲ ಗೊಂದಲವು ಮೂಡಿದೆ,ಇದರಿಂದ ಪೊಲೀಸರು ಬಿಗಿ‌ ಭದ್ರತೆ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES