Tuesday, May 14, 2024

ರಾತ್ರಿ ಸುರಿದ ಭಾರಿ ಮಳೆಗೆ ರೈಲ್ವೆ ಅಂಡರ್ ಪಾಸ್​​ಗಳು ಜಲಾವೃತ

ದೇವನಹಳ್ಳಿ : ರಾತ್ರಿ ಸುರಿದ ಭಾರಿ ಮಳೆಗೆ ರೈಲ್ವೆ ಅಂಡರ್ ಪಾಸ್ ಗಳ ಜಲಾವೃತವಾಗಿದ್ದು, ಅವೈಜ್ಞಾನಿಕ ಅಂಡರ್ ಪಾಸ್ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏರ್ಪೋಟ್ ಸುತ್ತಾಮುತ್ತಲಿನ ರೈಲ್ವೆ ಅಂಡರ್ ಪಾಸ್ಗಳಲ್ಲಿ ತುಂಬಿದ ನೀರು, ಕೆಂಪೇಗೌಡ ಏರ್ಪೊಟ್ ಪಕ್ಕದ ಹಲವು ಅಂಡರ್ ಪಾಸ್ ಗಳ ಜಲಾವೃತವಾಗಿದೆ. ರಾಷ್ತ್ರೀಯ ಹೆದ್ದಾರಿ 7 ರ ಐವಿಸಿ ರಸ್ತೆಯ ರೈಲ್ವೆ ಅಂಡರ್ ಪಾಸ್ ಮಳೆ ನೀರಿನಿಂದ ಭರ್ತಿಯಾಗಿದ್ದು, ಅವೈಜ್ಞಾನಿಕ ಅಂಡರ್ ಪಾಸ್ ವಿರುದ್ದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕೆಂಪೇಗೌಡ ಏರ್ಪೊಟ್ ಪಕ್ಕದ ಐವಿಸಿ ರಸ್ತೆ ರೈಲ್ವೆ ಅಂಡರ್ ಪಾಸ್​ನಲ್ಲಿ ಅವಾಂತರವಾಗಿದ್ದು, ನೆನ್ನೆಯಿಂದ ಅಂಡರ್ ಪಾಸ್ಗಳಲ್ಲಿ ಕೆಟ್ಟು ನಿಂತು ಸಾಕಷ್ಟು ವಾಹನಗಳು, ದೊಡ್ಡಬಳ್ಳಾಪುರ ಮೂಲಕ ಹಿಂದೂಪುರ ಕಡೆಯಿಂದ ಏರ್ಪೋಟ್ ಗೆ ಬರೂ ಪ್ರಮುಖ ರಸ್ತೆ, ಜಲಾವೃತದಿಂದ ಹತ್ತಾರು ಗ್ರಾಮಗಳ ಗ್ರಾಮಸ್ಥರು ಹತ್ತಾರು ಕಿಲೋ ಮೀಟರ್ ಸುತ್ತಾಡಿಕೊಂಡು ಸಂಚಾರ ಮಾಡುತ್ತಿದ್ದರು.

RELATED ARTICLES

Related Articles

TRENDING ARTICLES