Sunday, May 12, 2024

KPSC SCAM: ಡಿ.ಕೆ.ಶಿ. ಬ್ರದರ್ಸ್ ವಿರುದ್ಧ ರೇಣುಕಾಚಾರ್ಯ ಕಿಡಿ

ಬೆಂಗಳೂರು : ಕೆಪಿಎಸ್​​ಸಿ ಪರೀಕ್ಷೆಯಲ್ಲಿ ಪಾಸ್ ಮಾಡೋದಾಗಿ 25 ಲಕ್ಷ ನೀವು ಪಡೆದಿಲ್ವಾ? ಎಂದು ಡಿಕೆ ಬ್ರದರ್ಸ್​​ ವಿರುದ್ಧ  ಎಂಪಿ‌ ರೇಣುಕಾಚಾರ್ಯ ಕಿಡಿಕಾರಿದರು.

KPSC ನೇಮಕಾತಿ ಪರೀಕ್ಷೆಯಲ್ಲಿ ಡಿ.ಕೆ.ಶಿ. ಬ್ರದರ್ಸ್ ದೋಖಾ ವಿಚಾರ ಕುರಿತು ನಮ್ಮ ಪವರ್​ ಟಿವಿ ವಿಸ್ತಾರ ವರದಿ ಬಿತ್ತರಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ‌ ರೇಣುಕಾಚಾರ್ಯ ಕಾಂಗ್ರೆಸ್ ಅಂದ್ರೆ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹೆಸರು.

KPSC ಪರೀಕ್ಷೆಯಲ್ಲಿ ಪಾಸ್ ಮಾಡೋದಾಗಿ 25 ಲಕ್ಷ ಪಡೆದಿಲ್ವಾ ನೀವು? ಹಣ ಪಡೆದು ವಾಪಾಸ್ ಕೊಡದೇ ಅವರ ಮೇಲೆ ನೀವು ಗೂಂಡಾಗಿರಿ ಮಾಡಿಲ್ವಾ ನೀವು? ಎಂದಿದ್ದಾರೆ. ಆ ಕುಟುಂಬದ ಮೇಲೆ ಗೂಂಡಾಗಿರಿ, ದೌರ್ಜನ್ಯ ಮಾಡಿದ್ದಾರೆ.ನೈತಿಕ ಹೊಣೆ ಹೊತ್ತು‌ ಸಂಸದ ಸ್ಥಾನಕ್ಕೆ ರಾಜೀನಾಮೆ ‌ಕೊಡಬೇಕು.ನಾನು ಈ ಪ್ರಕರಣವನ್ನು ತನಿಖೆ ಆಗ್ರಹಿಸುತ್ತೆನೆ.ನಿಮ್ಮ ಜಟಾಪಟಿಗೆ ವಿಷಯಾಂತರ ಮಾಡಲು ಹೊರಟಿದ್ದಾರೆ. ಅಶ್ವಥ್ ನಾರಾಯಣ್ ಅವರನ್ನ ಟಾರ್ಗೆಟ್ ಮಾಡಿದ್ದಾರೆ.ನಮ್ಮ‌ ಪಕ್ಷದವರ ಯಾರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES