Sunday, May 19, 2024

ಡಿ‌.ಕೆ.ಸುರೇಶ ವಿರುದ್ಧ FIR ಆಗಬೇಕು : ಶಾಸಕ ಸುನೀಲ್ ನಾಯ್ಕ

ಕಾರವಾರ : ಡಿ. ಕೆ. ಸುರೇಶ್​ ಅವರ ಪ್ರವೃತ್ತಿ ಎಲ್ಲರಿಗೂ ಗೊತ್ತಿರುವಂತದ್ದೆ. ಕಾಂಗ್ರೆಸ್ ಸರಕಾರ ಇದ್ದಾಗಿನಿಂದಲೂ ಡಿ .ಕೆ. ಬ್ರದರ್ಸ್​​​ ಇಂತಹದ್ದೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಈ ಕೂಡಲೇ ಡಿ‌. ಕೆ. ಸುರೇಶ ವಿರುದ್ಧ FIR ಆಗಬೇಕು ಎಂದು ಭಟ್ಕಳ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಹೇಳಿದರು.

ಕೆಪಿಎಸ್‌ಸಿ ಹಾಗೂ ಪೊಲೀಸ್ ನೇಮಕ ವಿಚಾರದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್ ಐ ಆರ್ ದಾಖಲಿಸಿ ತನಿಖೆ ಕೈಗೊಳ್ಳಬೇಕು. ಈ ಬಗ್ಗೆ ನಾನು ಸಹ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಇದರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು ಎಂದರು. PSI ನೇಮಕಾತಿ ವಿಚಾರದಲ್ಲಿ ನಮ್ಮ ಸರಕಾರವೇ ತನಿಖೆಗೆ ಆದೇಶಿಸಿದೆ. ಹೀಗಾಗಿ ಕೆಪಿಎಸ್​​ಸಿ ನೇಮಕಾತಿ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯಿಲ್ಲ.ಎಂದು ಹೊನ್ನಾವರದಲ್ಲಿ ಭಟ್ಕಳ ಶಾಸಕ ಸುನೀಲ್ ನಾಯ್ಕ ಹೇಳಿದ್ದಾರೆ.

RELATED ARTICLES

Related Articles

TRENDING ARTICLES