Monday, May 20, 2024

ನಮ್ಮಲ್ಲಿ ವಲಸಿಗರಿಲ್ಲ!- ಇಂಧನ ಸಚಿವ ಸುನೀಲ್​ಕುಮಾರ್

ಬೆಂಗಳೂರು: ವಲಸೆ ಎನ್ನುವ ಶಬ್ಧ ನಮ್ಮ ಪಕ್ಷದಲ್ಲಿ ಇಲ್ಲ. ನಮ್ಮ ಪಕ್ಷಕ್ಕೆ ಬಂದವರೆಲ್ಲರೂ ನಮ್ಮ ಪಕ್ಷದವರೇ. ನಾವೆಲ್ಲ ಒಂದಾಗಿ ಚುನಾವಣೆ ನಡೆಸುತ್ತೇವೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮತ್ತೊಮ್ಮೆ ಸರ್ಕಾರ ರಚಿಸುತ್ತೇವೆ. ಯಾರಿಗೆ ಅಭದ್ರತೆ ಕಾಡುತ್ತೋ, ಅವರಿಗೆ ಹೊರಗಡೆ ಬರಬೇಕು ಅನಿಸುತ್ತದೆ. ಕಾಂಗ್ರೆಸ್​ಗೆ ಅಭದ್ರತೆ ಕಾಡುತ್ತೆ. ನಮಗೆ ಆ ರೀತಿಯ ಸಮಸ್ಯೆಯಿಲ್ಲ.

ನಮ್ಮ ಕಾರ್ಯಕರ್ತರ ವಿಸ್ತರಣೆಯಿಂದ ರಾಜ್ಯದಲ್ಲಿ ಮತ್ತೊಮ್ಮೆ ಗೆದ್ದು ಬರುತ್ತೇವೆ. ಡಿಕೆಶಿಯನ್ನ ಆನಂದ್ ಸಿಂಗ್ ಭೇಟಿಯಾದ ತಕ್ಷಣ ರಾಜಕೀಯ ಬಣ್ಣ ಕಟ್ಟುವ ಅವಶ್ಯಕತೆ ಇಲ್ಲ. ಎಲ್ಲೆ ಮೀರಿ ಕೆಲಸ ಮಾಡುವವರಿಗೆ ಕರೆದು ಮಾತನಾಡುವ, ಎಚ್ಚರಿಕೆ ಕೊಡುವ ಕೆಲಸ ಆಗುತ್ತದೆ ಅಂತ ಇಂಧನ ಸಚಿವ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES