Sunday, May 19, 2024

ವಿಜಯಪುರದಲ್ಲಿ ಯತ್ನಾಳ್ ಹೊಸ ಬಾಂಬ್

ವಿಜಯಪುರ: ಕಾಂಗ್ರೆಸ್ ಪಕ್ಷ ಬಿಡೋರ ಲಿಸ್ಟ್ ನನ್ನ ಬಳಿ ಇದೆ ಹಾಗೇ ಬಿಜೆಪಿ ಬಿಡೋರ ಲಿಸ್ಟ್ ಕೂಡ ನನ್ನ ಬಳಿ ಇದೆ. ಕಾಲಕಾಲಕ್ಕೆ‌ ಹೇಳ್ತೀನಿ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ.

6 ತಿಂಗಳು ತಡಿರಿ ಹೇಗೆ ನಡೆಯುತ್ತೆ ನೋಡಿ ಜಾದೂ.ಕಾಂಗ್ರೆಸ್ ನಿಂದ ಪಕ್ಷ ಬಿಡೋರ ಸಂಖ್ಯೆ ಈಗ ಹೇಳಲು ಬರಲ್ಲ.ಕಾಂಗ್ರೆಸ್ ನಿಂದ ಸಿದ್ದರಾಮಯ್ಯರೇ ಬಿಟ್ಟರೆ ಅಚ್ಚರಿ ಇಲ್ಲ ಎಂದು ನಿನ್ನೆ ಹೇಳಿದ್ದೇನೆ.ಸಿದ್ಧರಾಮಯ್ಯ ಮುಗಿಸೋದೆ ಡಿಕೆಶಿ ಪಾದಯಾತ್ರೆ ಉದ್ದೇಶ.ಜನರಿಗಾಗಿ ಪಾದಯಾತ್ರೆ ಮಾಡಿಲ್ಲ.ದೇಶ ಆಳಿದ ಕಾಂಗ್ರೆಸ್ಸಿಗರು ಆಗ ಮೇಕೆದಾಟು, ಆಲಮಟ್ಟಿಗೆ ಹೋರಾಟ ಮಾಡಲಿಲ್ಲ.ಆವಾಗ ಕಾವೇರಿ ನ್ಯಾಯ ಬಗೆ ಹರಿಸಲಿಲ್ಲ.ಅಧಿಕಾರ ಅನುಭವಿಸಿ, ಲೂಟಿ ಮಾಡಿ ಮತ್ತೆ ಅಧಿಕಾರಕ್ಕಾಗಿ ಹೋರಾಟ ಮಾಡ್ತಿದ್ದಾರೆ.ಕಾಂಗ್ರೆಸ್ಸಿಗರು 30 ವರ್ಷ ಮಾಡಿದ ಲೂಟಿ ಹಣವನ್ನ ರಾಜ್ಯ ಸರ್ಕಾರಕ್ಕೆ ವಾಪಸ್ ನೀಡಿದರೇ ಎಲ್ಲ ನೀರಾವರಿ ಯೋಜನೆ ಮುಗಿಯುತ್ತದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES