Friday, October 18, 2024

ಜನಗಳನ್ನು ಬಲಿಪಶು ಮಾಡಬೇಡಿ : ದುನಿಯಾ ವಿಜಯ್

ರಾಜ್ಯ : ಭಾರತದಲ್ಲಿ ಕೊವಿಡ್ ಪ್ರಕರಣ ಹೆಚ್ಚುತ್ತಿದೆ. ಬೆಂಗಳೂರಿನಲ್ಲೂ ಕೊವಿಡ್ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಈ ಕಾರಣಕ್ಕೆ ಲಾಕ್ಡೌನ್ ಮಾಡಬಹುದು ಎನ್ನುವ ಮಾತು ಕೇಳಿ ಬಂದಿದೆ.

ಇದರಿಂದ ಚಿತ್ರರಂಗದ ಮೇಲೆ ನೇರ ಪರಿಣಾಮ ಬೀರುತ್ತದೆ. ಲಾಕ್ಡೌನ್ ಬಗ್ಗೆ ದುನಿಯಾ ವಿಜಯ್ ಈ ರೀತಿಯಾಗಿ ಹೇಳಿದ್ದಾರೆ. ‘ಲಾಕ್ ಡೌನ್ ಪ್ರಾಮಾಣಿಕವಾಗಿ ಆಗಲಿ. ಇದರಲ್ಲಿ ರಾಜಕೀಯದ ದುರುಪಯೋಗ ಬೇಡ. ತುಂಬಾ ಜನ ಈಗ ತಾನೇ ಬಡವರು ಸುಧಾರಿಸಿಕೊಳ್ಳುತ್ತಿದ್ದಾರೆ.

ಸರ್ಕಾರಕ್ಕೆ ನನ್ನ ಮನವಿ ನಿಮ್ಮ ಸೌಲಭ್ಯಗಳಿಗೆ ಜನಗಳನ್ನು ಬಲಿಪಶು ಮಾಡಬೇಡಿ. ಅಕ್ಕಿ ಕೊಟ್ಟಿದ್ದಾರೆ. ಕೆಲವರಿಗೆ ಸಿಕ್ಕಿದೆ, ಕೆಲವರಿಗೆ ಸಿಕ್ಕಿಲ್ಲ. ಈ ತರದ ಅನ್ಯಾಯ ಬೇಡ. ಎಷ್ಟು ಅನ್ಯಾಯ ಆಗಿದೆ ಅಂತ ಜನಗಳಿಗೆ ಗೊತ್ತು. ನಾನು ಯಾವುದೇ ಸರ್ಕಾರನ ಹೋಲಿಸಿ ಮಾತನಾಡುತ್ತಿಲ್ಲ’ ಎಂದು ದುನಿಯಾ ವಿಜಯ್ ಅವರು  ಹೇಳಿದ್ದಾರೆ.

RELATED ARTICLES

Related Articles

TRENDING ARTICLES