Monday, May 20, 2024

ಮೆಂಟಲ್ ಗಿರಾಕಿಗಳಿಗೆ ಉತ್ತರ ಕೊಡಲ್ಲ : ಡಿ.ಕೆ ಶಿವಕುಮಾರ್

ಬೆಂಗಳೂರು : ಯಾರೋ ಮೆಂಟಲ್ ಗಿರಾಕಿಗಳಿಗೆ ಉತ್ತರ ಕೊಡಲು ನಾನು ತಯಾರಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ.

ನಿನ್ನೆ ನಡೆದ ಅಲ್ಪ ಸಂಖ್ಯಾತರ ಸಮಾವೇಶದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಟ್ವೀಟ್ ಮಾಡಿತ್ತು. ಈ ಬಗ್ಗೆ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿರುವ ಡಿ.ಕೆ ಶಿವಕುಮಾರ್ ಅವರು, ನಮ್ಮ ಪಾರ್ಟಿ ವಿಚಾರಕ್ಕೆ ಅವರೇನು ಟ್ವೀಟ್ ಮಾಡೋದು(!?) ಮೊದಲು ಅವರ ಪಾರ್ಟಿಯಲ್ಲಿ ಇರೋ ಹೆಗ್ಗಣ ಕಿತ್ತು ಬಿಸಾಕಲಿ. ನಮ್ಮ ಪಾರ್ಟಿ ನಾವು ಹೆಂಗ್ ಮಾಡಬೇಕು ಅಂತ ಗೊತ್ತು ಎಂದು ಖಾರವಾಗಿ ಉತ್ತರಿಸಿದ್ದಾರೆ.

ಅದುವಲ್ಲದೇ ನಿನ್ನೆ ಪುನೀತ್ ರಾಜ್‍ಕುಮಾರ್ ಕಾರ್ಯಕ್ರಮ ಇತ್ತು ಅದಕ್ಕಾಗಿ ಚಿಕ್ಕ ಭಾಷಣ ಮಾಡಿ ಹೋದರು. ಸಿಎಂ ಮಾತಾಡಿದ್ದರೇ ಹೇಳಿ ನಾನು‌ ಮಾತಾಡುತ್ತೇನೆ. ಹೌದು ನಿನ್ನೆ ನಾನು ಗರಂ ಆಗಿದ್ದೆ. ಒಂದೊಂದು ಸಮಯದಲ್ಲಿ ಸಾಫ್ಟ್ ಆಗಿರುತ್ತೇನೆ. ಒಂದೂಂದು ಸಲ ಗರಂ ಆಗಿರುತ್ತೇನೆ, ಇದು ನನ್ನ ಸ್ವಭಾವ. ನಾನು ಬೈದ್ರು ಪ್ರೀತಿಯಿಂದ ನೋಡ್ತಾರೆ. ಅವರು ನಮ್ಮ ಮನೆಯ ಮಕ್ಕಳು ಎಂದರು.

ಇದೇ ವೇಳೆ ಜಮೀರ್​ ಬಗ್ಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಖಾನ್ ದೆಹಲಿಗೆ ಹೋಗಿರುತ್ತಾರೆ ಅದಕ್ಕೆ ಕಾರ್ಯಕ್ರಮಕ್ಕೆ ಬಂದಿರುವುದಿಲ್ಲ, ಪ್ರತಿಯೊಬ್ಬರಿಗೂ ಬೆಂಬಲಿಗರು ಇರ್ತಾರೆ ಎಂದು ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ.

RELATED ARTICLES

Related Articles

TRENDING ARTICLES