Monday, May 20, 2024

‘ಕಾಂಗ್ರೆಸ್ ರಾಜಭವನ ಚಲೋ ಕಾರ್ಯಕ್ರಮಕ್ಕೆ ಬಿಜೆಪಿ ವ್ಯಂಗ್ಯ’

ಬೆಂಗಳೂರು : ರೈತರ ಆತ್ಮಹತ್ಯಗೆ ಕಾರಣವಾಗಿದ್ದ ಕಾಂಗ್ರೆಸ್ ಹೋರಾಟ ನಾಟಕೀಯವಾಗಿದೆ. ಅಧಿಕಾರದುದ್ದಕ್ಕೂ ನೂರಾರು ರೈತರ ಆತ್ಮಹತ್ಯೆಗೆ ಕಾರಣವಾಗಿದ್ದಿರಿ. ರೈತ ಪರ ಕಾಯ್ದೆಗಳಿಗೆ ನಾಟಕೀಯ ವಿರೋಧ ವ್ಯಕ್ತಪಡಿಸುತ್ತಿದ್ದಿರಿ. 2013 ರಿಂದ 2019 ರವರೆಗೆ 3800 ರೈತರ ಆತ್ಮಹತ್ಯೆಗೆ ಕಾರಣವಾಗಿದ್ದಿರಿ. 2013-14 104 ರೈತರು, 2014-15ರಲ್ಲಿ 128 ರೈತರು, 2015-16 ರಲ್ಲಿ 1483 ರೈತರು, 2016-17 ರಲ್ಲಿ 1185 ರೈತರು, 2018-19 ರಲ್ಲಿ 900 ರೈತರ ಆತ್ಮಹತ್ಯೆಗೆ ಕಾರಣವಾಗಿದ್ದಿರಿ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಕಣ್ಣೀರು ಒರೆಸುವ ಕೆಲಸ ಮಾಡಿಲ್ಲ. ಆದರೆ ಟಿಪ್ಪು ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ನಿರತರಾಗಿದ್ದರಿ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.

RELATED ARTICLES

Related Articles

TRENDING ARTICLES