Tuesday, October 29, 2024

ಪರಿಷತ್ ನಲ್ಲಿ ಸಭಾಪತಿ ಕುರ್ಚಿಗಾಗಿ ಹಿಂದೆದೂ ಆಗದ ಗಲಾಟೆ

ಬೆಂಗಳೂರು: ವಿಧಾನ ಪರಿಷತ್ ಕಲಾಪ ಆರಂಭ ಆಗುತ್ತಿದ್ದಂತೆ ವಿಧಾನ ಪರಿಷತ್ ಮಾನ ಹರಾಜು ಹಾಕಿದ ಸದಸ್ಯರು. ರಣರಂಗವಾಗಿ ಮಾರ್ಪಟ್ಟಿದ್ದ ವಿಧಾನ ಪರಿಷತ್ ಕಲಾಪ. ಉಪಸಭಾಪತಿ ಧರ್ಮೇಗೌಡರನ್ನು ಕುರ್ಚಿಯಿಂದ ಎಳೆದಾಡಿದ ಕಾಂಗ್ರೆಸ್ ಸದಸ್ಯರು. ಈ ವೇಳೆ ಕಾಂಗ್ರೆಸ್ , ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ಉಂಟಾಯಿತು. 

ಕಲಾಪದಲ್ಲಿ ಬರಿ ಗದ್ದಲ, ನೂಕಾಟ ಮಾರ್ಷಲ್ ಗಳನ್ನು ಎಳೆದಾಡಿದ ಕಾಂಗ್ರೆಸ್ ಎಂಎಲ್ ಸಿಗಳು. ಕಲಾಪದಲ್ಲಿ ಕುರ್ಚಿಗಾಗಿ ಹಿಂದೆದೂ ಆಗದ ಗಲಾಟೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಷತ್ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ವಿಧಾನ ಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.

RELATED ARTICLES

Related Articles

TRENDING ARTICLES